ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆ: ಶಿಕ್ಷಕರಿಗಾಗಿ ಮನೋಯೋಗ ಶಿಬಿರ
): ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಮಕ್ಕಳ ಪರೀಕ್ಷಾ ಫಲಿತಾಂಶ ಸುಧಾರಣೆಗಾಗಿ ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ, ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಆಧ್ಯಾತ್ಮಿಕ ಪರಿಹಾರ ಕೇಂದ್ರ ಬೆಂಗಳೂರು ಇವರ ಸಹಯೋಗದಲ್ಲಿ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ ನಲ್ಲಿ ಆಗಸ್ಟ್ 21ರಂದು ಶಿಕ್ಷಕರಿಗಾಗಿ ಮನೋಯೋಗ ಶಿಬಿರ ಕಾರ್ಯಾಗಾರ ನೆಡೆಯಿತು.
ಬಳಿಕ ಡಾ.ವಿಶ್ವನಾಥ ಗುರುಜಿ ಅವರು ಕೆಲವು ಮನೋಯೋಗಗಳನ್ನು ಮಾಡುವುದರ ಮೂಲಕ ವಿದ್ಯಾರ್ಥಿಗಳ ಮನಸ್ಸು ಮತ್ತು ಏಕಾಗ್ರತೆಯನ್ನು ಹೇಗೆ ಹತೋಟಿಯಲ್ಲಿ ಇಡಬಹುದು ಎಂಬುದನ್ನು ಶಿಕ್ಷಕರಿಗೆ ತಿಳಿಸಿದರು. ಕೆಲವು ಸರಳ ಮನೋಯೋಗಗಳನ್ನು ಮಾಡುವುದರ ಮೂಲಕ ಮಕ್ಕಳನ್ನು ಓದು ಬರಹದ ಕಡೆ ಗಮನ ಹರಿಸುವಂತೆ ಹಾಗೂ ಮಕ್ಕಳು ಓದು ಬರದ ಬಗ್ಗೆ ಹೆಚ್ಚು ಒಲವು ತೋರುವಂತೆ ಅವರ ಮನಸ್ಸನ್ನು ಪರಿವರ್ತನೆ ಮಾಡಲು ಹಲವಾರು ಮನೋಯೋಗಗಳನ್ನು ಪ್ರಾತ್ಯಕ್ಷಿಕೆ ಮೂಲಕ ಶಿಕ್ಷಕರಿಗೆ ತಿಳಿಸಿದರು.
ಈ ಸಂಧರ್ಭದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರಾದ ಶ್ರೀಶೈಲ ಬಿರಾದಾರ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಲಕ್ಷ್ಮಿಕಾಂತ ಬಿ ನಾಲ್ವಾರ ಸೇರಿದಂತೆ ಶಾಲಾ ಶಿಕ್ಷಕರು ಹಾಗೂ ಇತರರಿದ್ದರು.
Comments are closed.