ಅಧಿಕಾರಿಗಳ ಮೇಲೆ ಕ್ರಮ ಆಗಬೇಕು ಮತ್ತು ಶೀಘ್ರವೇ ಗೇಟ್ ರಿಪೇರಿ ಆಗಬೇಕು -ನವೀನಕುಮಾರ ಈ ಗುಳಗಣ್ಣವರ

Get real time updates directly on you device, subscribe now.

 Koppal  ತಡರಾತ್ರಿ ತುಂಗಭದ್ರಾ ಅಣೆಕಟ್ಟಿನ ಗೇಟ್ ನಂಬರ್ 19 ನೇಯ ಚೈನ್ ಲಿಂಕ್ ಗೇಟ್ ಕಟ್ಟಾಗಿರುವುದು ನಿಜಕ್ಕೂ ಕೂಡ ದೊಡ್ಡ ಅನಾಹುತಕ್ಕೆ ಕಾರಣವಾಗಿದೆ,  ಅವಧಿಕಿನ ಮುಂಚೆ ಡ್ಯಾಮ್ ನಲ್ಲಿ ನೀರು ತುಂಬಿರುವುದು ರೈತರ ಮುಖದಲ್ಲಿ ಮಂದಹಾಸ ಮೂಡಿತ್ತು, ಈ ಭಾಗದ ಜೀವನಾಡಿ ಇರುವ ತುಂಗಭದ್ರಾ ಜಲಾಶಯ ಈ ಘಟನೆಯಿಂದ ಈ ಭಾಗದ ರೈತರಿಗೆ ನಷ್ಟ ಉಂಟು ಮಾಡಿದೆ.
 ಅಧಿಕಾರಿಗಳ ನಿರ್ಲಕ್ಷ  ಮತ್ತು ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಇಂತಹ ಘಟನೆಗಳಿಗೆ ಕಾರಣ ಬೇಸಿಗೆ ಸಂದರ್ಭದಲ್ಲಿ  ನಿರ್ವಹಣೆಯನ್ನು ಹಾಗೂ ರಿಪೇರಿಗೆ ನೀಡಿದ ಹಣವನ್ನು ಸರಿಯಾಗಿ ಸದ್ಬಳಕೆ ಮಾಡಿಕೊಂಡಿದ್ದರೆ  ಬಹುಶ: ಇಂತಹ ಘಟನೆ ನಡೆಯುತ್ತಿರಲಿಲ್ಲ. ಜಲಾಶಯದ ನಿರ್ವಹಣಾಕ್ಕೆ, ನೀಡಿದ ಹಣದ ದುರ್ಬಳಿಕೆ ಇಂಥ ಘಟನೆಗಳಿಗೆ ಕಾರಣ. ಈ ಘಟನೆಗೆ ಸಂಬಂಧಪಟ್ಟಂತೆ ನಿರ್ಲಕ್ಷ ವಹಿಸಿದ ಅಧಿಕಾರಿಗಳ ಮೇಲೆ ಕ್ರಮ ಆಗಬೇಕು ಮತ್ತು ಶೀಘ್ರವೇ ಗೇಟ್ ರಿಪೇರಿ ಆಗಬೇಕು  ಆಗುವ ಅನಾಹುತಕ್ಕೆ ಕಡಿವಾಣ ಹಾಕಬೇಕೆಂದು  ಬಿಜೆಪಿ  ಜಿಲ್ಲಾ ಅಧ್ಯಕ್ಷ ನವೀನಕುಮಾರ ಈ ಗುಳಗಣ್ಣವರ

ಆಗ್ರಹಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!
%d bloggers like this: