ಶ್ರೀ ಗವಿಸಿದ್ದೇಶ್ವರ ಸಂಯುಕ್ತ ಪ್ರೌಢಶಾಲೆ :  ಮುಖ್ಯೋಪಾಧ್ಯಾಯರಾಗಿ ಅಮರೇಶ ಕರಡಿ 

Get real time updates directly on you device, subscribe now.

ಕೊಪ್ಪಳ : ನಗರದ ಶ್ರೀ ಗವಿಸಿದ್ದೇಶ್ವರ ಸಂಯುಕ್ತ ಪ್ರೌಢಶಾಲೆಗೆ ಪ್ರಭಾರಿ ಮುಖ್ಯೋಪಾಧ್ಯಾಯರಾಗಿ  ಶಾಲೆಯ ಹಿರಿಯ ಶಿಕ್ಷಕರಾದ ಅಮರೇಶ್ ಆದಪ್ಪ ಕರಡಿ ಅಧಿಕಾರ ಸ್ವೀಕರಿಸಿದರು.
ಮುಖ್ಯೋಪಾಧ್ಯಾಯರಾದ ವೆಂಕಟೇಶ್ .ಕೆ ಬಂಡಿವಡ್ಡರ್ ಅವರು ಅಮರೇಶ್ ಕರಡಿಯವರಿಗೆ ಅಧಿಕಾರ ಹಸ್ತಾಂತರಿಸಿದರು.
ನಂತರ ನೂತನ ಪ್ರಭಾರಿ ಮುಖ್ಯೋಪಾಧ್ಯಾಯ  ಅಮರೇಶ್ ಕರಡಿಯವರಿಗೆ ಗವಿಮಠದ ಶ್ರೀಗಳು,ಆಡಳಿತ ಮಂಡಳಿಯವರು,
 ಹಿರಿಯ ಶಿಕ್ಷಕರು, ಸಿಬ್ಬಂದಿ ವರ್ಗದವರು ಶುಭಕೋರಿದರು .
ಈ ಸಂದರ್ಭದಲ್ಲಿ  ನಿವೃತ್ತ  ಶಿಕ್ಷಕರಾದ ಎಸ್.ಎಂ ಕಂಬಾಳಿಮಠ. ಹಿರಿಯ ಶಿಕ್ಷಕರಾದ  ಎಂ ಎನ್ ಕಮ್ಮಾರ್ , ಎಸ್ ಗುಂಡನಗೌಡ್ರು,ಆರ್ ಬಿ ಬಾಳನ ಗೌಡ್ರು, ವಿ.ಜೆ ಹಿರೇಮಠ್ ಮರಿ ಶಾಂತವೀರ ಶೆಟ್ಟರ್, ರವಿ ರಂಜಣಗಿ, ಶ್ರೀನಿವಾಸ್ ವೀರಾಪುರ, ನಾಗರಾಜ್ ಬಹದ್ದೂರ್ ಬಂಡಿ, ಕವಿತಾ ಮನು, ಎಸ್ ಪಿ ರೆಡ್ಡಿಯರ್ , ಶಿಕ್ಷಕರು ಮತ್ತು ಸಿಬ್ಬಂದಿ  ಹಾಜರಿದ್ದರು

Get real time updates directly on you device, subscribe now.

Comments are closed.

error: Content is protected !!