ಆತ್ಮಹತ್ಯೆ ಮಾಡಿಕೊಳ್ಳಲು ಹೊರಟವನ ಜೀವ ಉಳಿಸಿದ ಪತ್ರಕರ್ತರು

Get real time updates directly on you device, subscribe now.

ಕೊಪ್ಪಳ :ನೀರಿನ ಟ್ಯಾಂಕ್ ಹತ್ತಿ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ವ್ಯಕ್ತಿ ಹೈಡ್ರಾಮಾ ಮಾಡುತ್ತಿದ್ದ ವ್ಯಕ್ತಿಯ ಜೀವವನ್ನು ಉಳಿಸುವುದರ ಮೂಲಕ ಕೊಪ್ಪಳದ ಪತ್ರಕರ್ತರು ಮಾದರಿಯಾಗಿದ್ದಾರೆ .

ಕೊಪ್ಪಳ ನಗರದ ಗವಿಮಠದ ಮುಂಬಾಗದಲ್ಲಿರುವ ನೀರಿನ ಟ್ಯಾಂಕ್ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು  ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಆಡೂರು ನಿವಾಸಿಪ್ರ ಕಾಶ್ ಅನ್ನೋ ವ್ಯಕ್ತಿಯಿಂದ ಆತ್ಮಹತ್ಯೆ ಬೆದರಿಕೆ ಹಾಕುತ್ತಿದ್ದನನಗೆ ಅನ್ಯಾಯವಾಗಿದೆ, ನನಗೆ ನ್ಯಾಯ ಬೇಕು ಎನ್ನುತ್ತಿದ್ದ ವ್ಯಕ್ತಿಯ ಮನವಲಿಸಲು ಮುಂದಾದ ಖಾಸಗಿ ವಾಹಿನಿಯ ಹಿರಿಯ ವರದಿಗಾರ ರಾಜು ಬಿ ಆರ್ ಹಾಗೂ ಮಾರುತಿ ಅವನ ಮನವೊಲಿಸಲು ಯತ್ನಿಸಿದ್ದಾರೆ.  ಇವರ ಮಾತಿಗೆ ಒಪ್ಪದೇ   ಮೇಲಿನಿಂದ ಜಿಗಿದ ಪ್ರಕಾಶ್ ನಿಗೆ ಸಣ್ಣಪುಟ್ಟ  ಗಾಯಗಳಾಗಿವೆ. ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸ್ಥಳಕ್ಕೆ ಆಗಮಿಸಿದ್ದ ಕೊಪ್ಪಳ ನಗರ ಠಾಣೆ ಪೊಲೀಸರು  ಆತನ ಮನವೊಲಿಸಲು ಕೆಲ್ಸ ಮಾಡಿದ್ದಾರೆ. ಆದ್ರೆ ಅವರ ಮಾತನ್ನು  ಕೇಳಿಲ್ಲ.  ಕೊನೆಗೆ ಕೆಳಗೆ ಬಿದ್ದ ಪ್ರಕಾಶ್ನನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ.

ತಮ್ಮ ಜೀವದ ಹಂಗು ತೊರೆದು ವ್ಯಕ್ತಿಯ   ಜೀವ ಉಳಿಸಲು ಪ್ರಯತ್ನಿಸಿದ ಪತ್ರಕರ್ತರ ಈ ಪ್ರಯತ್ನಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

Get real time updates directly on you device, subscribe now.

Comments are closed.

error: Content is protected !!
%d bloggers like this: