ಬಿಸರಳ್ಳಿ ಗ್ರಾಮ ಪಂಚಾಯತ : ನರೇಗಾ ಕಾಮಗಾರಿ ಪರಿಶೀಲನೆ

Get real time updates directly on you device, subscribe now.

  ಬಿಸರಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಅಳವಂಡಿ ಹೋಬಳಿಯ ಕೃಷಿ ಇಲಾಖೆಯಿಂದ ಅನುಷ್ಠಾನಿಸುತ್ತಿರುವ ಕಂದಕ  ಬದು ನಿರ್ಮಾಣ ಕಾಮಗಾರಿ ಹಾಗೂ ಗ್ರಾಮ ಪಂಚಾಯತಿಯ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ರವಿವಾರದಂದು ಕೊಪ್ಪಳ ತಾಲೂಕ ಪಂಚಾಯತಿಯ ನರೇಗಾ ಸಹಾಯಕ ನಿರ್ದಶೇಕರಾದ ಯಂಕಪ್ಪ ಭೇಟಿ, ಕಾಮಗಾರಿ ಪರಿಶೀಲಿಸಿದರು.

ನಂತರ ಮಾತನಾಡಿದ ಅವರು, ಪ್ರತಿ ಬದು ಹಾಕುವಾಗ ಮಣ್ಣನ್ನು ಗಟ್ಟಿಗೊಳಿಸಿ. ಇದರಿಂದ ಮಣ್ಣು ಕಟ್ಟೆಗೆ ಬೀಳುವುದಿಲ್ಲ ಮತ್ತು ಮಳೆ ಬಂದಲ್ಲಿ ಕಟ್ಟೆಯ ತುಂಬಾ ನೀರು ನಿಲ್ಲುತ್ತದೆ. ಇದರಿಂದ ಜಮೀನಿನಲ್ಲಿ ನೀರಿನ ತೇವಾಂಶ ಕಾಪಾಡುವುದರ ಜೊತೆಗೆ ಫಲವತ್ತತೆ ಹೆಚ್ಚಾಗುತ್ತದೆ. ಬದು ಪ್ರತಿಯೊಬ್ಬ ರೈತರಿಗೆ ಸಹಾಯಕವಾಗುವ ಕಾಮಗಾರಿ ಆಗಿದೆ. ಸ್ಥಳದಲ್ಲಿ ಹಾಜರಿದ್ದ ಜಮೀನಿನ ಮಾಲೀಕರಿಗೆ ಬದುವಿನ ಮೇಲೆ ಔಡಲ, ಹೀರೆಬಳ್ಳಿ, ಸವತೆಬಳ್ಳಿ ಹಚ್ಚಿಕೊಂಡು ಅದರಿಂದ ಕೂಡ ಲಾಭ ಪಡೆಯಬಹುದು. ವರ್ಷಪೂರ್ತಿ ಆದಾಯಕ್ಕೆ ದಾರಿ ಮಾಡಿಕೊಂಡಗಾಗುತ್ತದೆ. ಬದುವಿನ ಜೊತೆಗೆ ಬದು ಬೇಸಾಯದ ಕಡೆಗೆ ಹೆಚ್ಚು ಗಮನ ಹರಿಸಬೇಕೆಂದರು.
ಪ್ರತಿ ಬದುವಿನ ಮೇಲೆ ವಿವಿಧ ಜಾತಿಯ ಸಸಿಗಳನ್ನು ನೆಡುವುದರಿಂದ ಭೂಮಿಯ ತೇವಾಂಶ ಹೆಚ್ಚಳದ ಜೊತೆಗೆ ಬೆಳೆಗಳಿಗೆ ಅನುಕೂಲವಾಗುತ್ತದೆ. ಒಂದು ಆರ್ಥಿಕ ವರ್ಷದಲ್ಲಿ ಒಂದು ಕುಟುಂಬಕ್ಕೆ 100 ದಿನಗಳ ಅಕುಶಲ ಕೆಲಸವನ್ನು ಬದು ನಿರ್ಮಾಣ ಕಾಮಗಾರಿಯಲ್ಲಿ ಕೆಲಸ ನೀಡಲು ಸೂಚಿಸಿದರು.
ಈ ಸಂದರ್ಭದಲ್ಲಿ ಅಳವಂಡಿ ಕೃಷಿ ಅಧಿಕಾರಿ ಪ್ರತಾಪಗೌಡ, ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ, ಅನುಷ್ಠಾನ ಇಲಾಖೆಯ ತಾಂತ್ರಿಕ ಸಂಯೋಜಕಿ ಕವಿತಾ, ಕೃಷಿ ತಾಂತ್ರಿಕ ಸಹಾಯಕಿ ಶಶಿರೇಖಾ, ಕಾಯಕ ಬಂಧುಗಳು ಹಾಗು 335 ಕೂಲಿಕಾರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: