ಬಡವರ ಆರ್ಥಿಕ ಸಬಲೀಕರಣವೆ ಕಾಂಗ್ರೆಸ್ ಪಕ್ಷದ ದ್ಯೇಯ – ಕೆ. ರಾಜಶೇಖರ ಹಿಟ್ನಾಳ

Get real time updates directly on you device, subscribe now.

ಕೊಪ್ಪಳ : ಕಾಂಗ್ರೆಸ್ ಸದಾ ಬಡವರ ಏಳಿಗೆಗಾಗಿ ಅನೇಕ ಯೋಜನೆಗಳನ್ನು ರಾಷ್ಟ್ರಕ್ಕೆ ಕೊಡಮಾಡಿದೆ ನಮ್ಮ ದೇಶವನ್ನು ರಾಜರು ಹಾಗೂ ಬ್ರಿಟಿಷರ ದಬ್ಬಾಳಿಕೆಯಿಂದ ದೇಶದ ಸಂಪತ್ತನ್ನು ಕೊಳ್ಳಿ ಹೊಡೆದು ಸ್ವತಂತ್ರ ನಂತರ ಅಂತ್ಯತ ಕಡೆ ಬಡವ ರಾಷ್ಟ್ರವಾಗಿದ್ದ ಭಾರತದ ಚುಕ್ಕಾಣೆಯನ್ನು ಆಧುನಿಕ ಭಾರತದ ಪಿತಾ,ಮಹಾ ಪಂಡಿತ್ ಜವಹಾರಲಾಲ್ ನೆಹರು ರವರು ಜವಾಬ್ದಾರಿ ವಹಿಸಿಕೊಂಡು ದೇಶವನ್ನು ಸಂಪತ್ತಭರಿತವಾಗಿ ಮಾಡಲು ಎಲ್ಲಾ ಸಂಪನ್ಮೂಲಗಳನ್ನು ಕ್ರೂಢಿಕರಣ ಮಾಡಿ ವಿಶ್ವದ ಭೂ ಪಟದಲ್ಲಿ ಭಾರತಕ್ಕೆ ವಿಶೇಷ ಸ್ಥಾನ ಮಾನ ಕಲ್ಪಿಸಿದ್ದು ಅಂದಿನ ಕಾಂಗ್ರೆಸ್ ಸರ್ಕಾರ ತದನಂತರ ಶ್ರೀಮತಿ ಇಂಧಿರಾ ಗಾಂಧಿ ರವರು ೨೦ಅಂಶಗಳ ಕಾರ್ಯಕ್ರಮದಿಂದ ದೇಶದ ಸಮಗ್ರ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿ ಭಾರತವನ್ನು ಅಭಿವೃದ್ಧಿ ರಾಷ್ಟ್ರಗಳ ಜೊತೆಗೆ ಪೈಪೋಟಿ ಮಾಡುವಂತೆ ನಿರ್ಮಾಣ ಮಾಡಿದ ಶ್ರೇಯಸ್ಸು ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ ಎಂದು ಭಾಗ್ಯನಗರ ಪಟ್ಟಣದ ಬಾಲಾಜಿ ಪಂಕ್ಷನ್ ಹಾಲನಲ್ಲಿ ನಡೆದ ಕೊಪ್ಪಳ ಲೋಕಸಭಾ ಚುನಾವಣೆ ಸಭೆಯ ಪ್ರಚಾರ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ರವರು ಹೇಳಿದರು

ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕರು ಕೆ. ಬಸವರಾಜ ಹಿಟ್ನಾಳ ರವರು ಅತ್ಯಂತ ಕಡುಬಡವ ರಾಷ್ಟ್ರವಾದ ಭಾರತದಲ್ಲಿ ಬಡವರಿಗೆ ೩ ಹೊತ್ತು ಊಟಕ್ಕೆ ಜನರು ಬಳಲುವ ಪರಿಸ್ಥಿತಿ ಸ್ವತಂತ್ರ ನಮತರ ದಿನಗಳಲ್ಲಿ ದೇಶದಲ್ಲೇಲಾ ಬಡತನ ತಾಂಡವ ಆಡುತ್ತಿತ್ತು ೩೦ ಕೋಟಿ ಜನಸಂಖ್ಯೆ ಹೊಂದಿದ ಭಾರತದಲ್ಲಿ ಇಂದು ೧೪೦ ಕೋಟಿ ಜನಸಂಖ್ಯೆಯುಳ್ಳ ಸಧೃಢ ರಾಷ್ಟ್ರವಾಗಿ ನಿರ್ಮಾಣವಾಗಲು ಕಾಂಗ್ರೆಸ್ ಕೊಡುಗೆ ಅಪಾರ ಎಂದು ಹೇಳಿದರು

ಗ್ಯಾರಂಟಿ ಸಮಿತಿ ಸದಸ್ಯರಾದ ಶ್ರೀಮತಿ ಜ್ಯೋತಿ ಗೊಂಡಬಾಳ ಮಾತನಾಡಿ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ವಿಶೇಷ ಗ್ಯಾರಂಟಿ ಯೋಜನೆಗಳನ್ನು ಈಗಾಗಲೇ ಎ.ಐ.ಸಿ.ಸಿ ಅಧ್ಯಕ್ಷರು ಘೋಷಣೆ ಮಾಡಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಜಿಪಂ ಅಧ್ಯಕ್ಷರುಗಳಾದ ಎಸ್‌ಬಿ ನಾಗರಳ್ಳಿ, ಟಿ ಜನಾರ್ದನ ಹುಲಗಿ ಮುಖಂಡರುಗಳಾದ ಜುಲ್ಲು ಖಾದರಿ ಗೂಳಪ್ಪ ಹಲಗೇರಿ ಭರಮಪ್ಪ ನಗರ ಸ್ಥಾಯಿ ಸಮಿತಿ ಸಧ್ಯಕ್ಷ ಅಕ್ಬರಪಾಷ ಪಲ್ಟನ್ ವೆಂಕಟೇಶ ಕಂಪಸಾಗರ ಕಾಟನ್ ಪಾಷ ಯಮನಪ್ಪ ಕಬ್ಬೇರ ಯಂಕಪ್ಪ ಹೊಸಳ್ಳಿ ಕೃಷ್ನ ಇಟ್ಟಂಗಿ ಶ್ರೀನಿವಾಸ ಗುಪ್ತಾ ಹೊನ್ನರುಸಾಬ ಗಂಗಾಧರ ಕಬ್ಬೇರ ಅಶೋಕ ಗೋರಂಟ್ಲಿ ಮಂಜುನಾಥ ಗೊಂಡಬಾಳ ಕಾವೇರಿ ರ್‍ಯಾಗಿ ಸವಿತಾ ಗೋರಂಟ್ಲಿ ಯಶೋಧ ಮರಡಿ ಶಿಲ್ಪಾ ಚನ್ನಪ್ಪ ತಟ್ಟಿ ಕಾರ್ಯಕ್ರಮ ನಿರೂಪಿಸಿ

Get real time updates directly on you device, subscribe now.

Comments are closed.

error: Content is protected !!
%d bloggers like this: