ಆನೆಗೊಂದಿ ಉತ್ಸವ: ಗಗನ್ ಮಹಲ್ ವಿದ್ಯುತ್  ದೀಪಾಲಂಕಾರಕ್ಕೆ ಜಿಲ್ಲಾಧಿಕಾರಿಗಳಿಂದ ಚಾಲನೆ

Get real time updates directly on you device, subscribe now.

ವಿಜಯನಗರ ಸಾಮ್ರಾಜ್ಯದ ತೊಟ್ಟಿಲು ಆನೆಗೊಂದಿ ಉತ್ಸವ-2024ರ ಅಂಗವಾಗಿ ಆನೆಗೊಂದಿಯ ಐತಿಹಾಸಿಕ ಗಗನ್ ಮಹಲ್ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದು, ದೀಪಾಲಂಕಾರಕ್ಕೆ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ರಿಬ್ಬನ್ ಕತ್ತರಿಸುವುದರ ಮೂಲಕ ಸೋಮವಾರ ಚಾಲನೆ ನೀಡಿದರು.
ಗಗನ್ ಮಹಲ್ ತನ್ನ ಸೊಗಸಾದ ವೈಶಿಷ್ಟ್ಯಗಳು ಮತ್ತು ಪ್ರಾಚೀನ ಭಾರತದ ಗೋಡೆಗಳಾದ್ಯಂತ ವಿಸ್ತರಿಸುವ ಅಸಾಧಾರಣ ಕಲಾಕೃತಿಗಳಿಗೆ ಹೆಸರುವಾಸಿಯಾಗಿದೆ. ಇದನ್ನು 15ನೇ ಶತಮಾನದಲ್ಲಿ ರಚಿಸಲಾದ ಕೌಶಲ್ಯಗಳು ಮತ್ತು ಬುದ್ಧಿವಂತ ಇಂಜನಿಯರಗಳಿಂದ ನಿರ್ಮಿಸಲಾಗಿದೆ. ಇದು ಈ ಮಹಲನ್ನು ಹಲವಾರು ಶತಮಾನಗಳವರೆಗೆ ಸ್ಥಿರ ಮತ್ತು ದೃಢವಾಗಿ ಮಾಡಿತು. ನವೆಂಬರ್‌ನಿಂದ ಫೆಬ್ರವರಿ ವರೆಗಿನ ಚಳಿಗಾಲದ ಅವಧಿಯಲ್ಲಿ ಗಗನ್ ಮಹಲ್ ವೀಕ್ಷಣೆಗೆ ಅನೇಕ ಪ್ರವಾಸಿಗರನ್ನು ಆಕರ್ಷಿಸುತ್ತದೆ, ಈ ಮಹಲ್ ಮತ್ತು ಅದರ ಭವ್ಯವಾದ ಉಷ್ಣತೆಯನ್ನು ಅನ್ವೇಷಿಸಲು ಇದು ಅತ್ಯುತ್ತಮ ಸಮಯವೆಂದು ಪರಿಗಣಿಸಲಾಗಿದೆ. ಗಗನ್ ಮಹಲ್ ಇಂದಿಗೆ 500 ವರ್ಷಗಳ ಹಿಂದೆ ಇದ್ದ ಇಂಜಿನಿಯರಗಳಿಂದ ಅಸಾಧಾರಣ ಕೌಶಲ್ಯವನ್ನು ಪ್ರದರ್ಶಿಸುತ್ತದೆ. ಈ ಅರಮನೆಯು ಬೇಸಿಗೆಯಲ್ಲಿಯು ತಂಪಾಗಿರುವ ರೀತಿಯಲ್ಲಿ ನಿರ್ಮಿಸಲ್ಪಟ್ಟಿದೆ. ಆನೆಗೊಂದಿ ಉತ್ಸವ ಹಿನ್ನೆಲೆಯಲ್ಲಿ ಗಗನ್ ಮಹಲ್ ಹೆಚ್ಚು ಆಕರ್ಷಣೀಯವಾಗಿ ಕಾಣಬೇಕೆಂಬ ಉದ್ದೇಶದಿಂದ ಗಗನ್ ಮಹಲ್‌ಗೆ ವಿದ್ಯುತ್ ದೀಪಾಲಂಕಾರದಿಂದ ಸಿಂಗರಿಸಲಾಗಿದೆ.
ಈ ಸಂದರ್ಭದಲ್ಲಿ ಗಂಗಾವತಿ ಶಾಸಕರಾದ ಜಿ.ಜನಾರ್ಧನ ರೆಡ್ಡಿ, ರಾಜವಂಶಸ್ಥರಾದ ಲಲಿತರಾಣಿ ರಂಗದೇವರಾಯಲು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ವಂಟಗೋಡಿ, ಕೊಪ್ಪಳ ಉಪವಿಭಾಗಾಧಿಕಾರಿಗಳಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಗಂಗಾವತಿ ತಹಶೀಲ್ದಾರರಾದ ಯು.ನಾಗರಾಜ, ತಾಲ್ಲೂಕು ಪಂಚಾಯತ್ ಇಓ ಲಕ್ಷ್ಮೀ ದೇವಿ, ಆನೆಗೊಂದಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಹದೇವಿ, ಉಪಾಧ್ಯಕ್ಷರಾದ ಪೂರ್ಣಿಮಾ, ಗಣ್ಯರಾದ ಅರುಣಾ ಲಕ್ಷ್ಮೀ ಸೇರಿದಂತೆ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: