ಗಂಗಾವತಿ: ಅತ್ಯಾಚಾರ ಆರೋಪಿಗಳಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಪ್ರಕಟ

Get real time updates directly on you device, subscribe now.

  ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಾಮೂಹಿಕ ಅತ್ಯಾಚಾರ ಮಾಡಿದ ಆರೋಪಿಗಳ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗಳಿಗೆಹಾಗೂ ತಲಾ ರೂ.3 ಲಕ್ಷಗಳ ದಂಡವನ್ನು ವಿಧಿಸಿ ಗಂಗಾವತಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯಕ ಅವರು ತೀರ್ಪು ಪ್ರಕಟಿಸಿದ್ದಾರೆ.
ಸಂತ್ರಸ್ತ ಮಹಿಳೆ, ಮೊದಲನೇ ಆರೋಪಿಯಾದ ಉತ್ತರ ಪ್ರದೇಶದ ಫಾರೂಕ್‌ಬಾದ್‌ನ ರೋಹಿತ್ ಪ್ರಮೋದ್ ಮಂಗಲಿಕ್ ಹಾಗೂ 2ನೇ ಆರೋಪಿಯಾದ ರಾಜಸ್ಥಾನದ ಸಿಕ್ಕರ್ ಜಿಲ್ಲೆಯ ಕದ್ರಾ ಗ್ರಾಮದ ರಾಜಕುಮಾರ ಮದನ್‌ಲಾಲ್ ಸೈನಿ ಈ ಮೂವರು ಹೈದ್ರಾಬಾದಿನ ಡಿ.ಇ & ಶಾ ಕಂಪನಿಯಲ್ಲಿ ಸಾಫ್ಟ್ವೇರ್ ಉದ್ಯೋಗಿಗಳಾಗಿದ್ದರು. ದಿನಾಂಕ:22-08-2015 ರಂದು ಆರೋಪಿಗಳು ಸಂತ್ರಸ್ತ ಮಹಿಳೆಯನ್ನು ಪ್ರವಾಸಕ್ಕೆ ಎಂದು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ವಿರುಪಾಪುರ ಗಡ್ಡೆಗೆ ಕರೆತಂದು, ಹೇಮ ಗೆಸ್ಟ್ ಹೌಸ್‌ನಲ್ಲಿ ರೂಮ್‌ನಲ್ಲಿ ತಂಗಿದ್ದಾಗ ಸಾಯಂಕಾಲ ಸಂತ್ರಸ್ತ ಮಹಿಳೆಗೆ ಸಾಫ್ಟ್ಡ್ರಿಂಕ್ಸ್ನಲ್ಲಿ ನಶೆ ಬರುವ ಮದ್ಯವನ್ನು ಬೆರೆಸಿ, ಕುಡಿಸಿ ಆಕೆಯ ಇಚ್ಛೆಗೆ ವಿರುದ್ದವಾಗಿ ಅತ್ಯಾಚಾರ ಮಾಡಿರುವ ಕುರಿತು ಸಂತ್ರಸ್ತ ಮಹಿಳೆ ದೂರು ಸಲ್ಲಿಸಿದ್ದರು.
ಪ್ರಕರಣದ ತನಿಖೆ ನಡೆಸಿದ್ದ ಅಂದಿನ ತನಿಖಾಧಿಕಾರಿಗಳಾದ ಗಂಗಾವತಿ ಗ್ರಾಮೀಣ ವಲಯದ ಸಿ.ಪಿ.ಐ ಪ್ರಭಾಕರ್ ಧರ್ಮಟ್ಟಿ ಅವರು ತನಿಖೆಯಲ್ಲಿ ಆರೋಪಿತರ ಮೇಲಿನ ಆರೋಪಗಳು ದೃಢಪಟ್ಟಿದ್ದರಿಂದ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಲಯದ ವಿಚಾರಣೆ ವೇಳೆ ಪ್ರಕರಣದ ಸಾಕ್ಷಿದಾರರ ಸಾಕ್ಷö್ಯ ಮತ್ತು ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಧೀಶರು ಆರೋಪಿತರು ತಪ್ಪಿತಸ್ಥರು ಎಂದು ತೀರ್ಪು ನೀಡಿ, ಭಾರತೀಯ ದಂಡ ಸಂಹಿತೆ ಕಲಂ 376(ಡಿ)-ಸಾಮೂಹಿಕ ಅತ್ಯಾಚಾರ ಅಪರಾಧಕ್ಕೆ 20 ವರ್ಷಗಳ ಕಠಿಣ ಕಾರಾಗೃಹ ವಾಸದ ಶಿಕ್ಷೆ ಹಾಗೂ ತಲಾ ರೂ.3 ಲಕ್ಷಗಳಂತೆ ಒಟ್ಟು ರೂ.06 ಲಕ್ಷಗಳನ್ನು ಸಂತ್ರಸ್ತ ಮಹಿಳೆಗೆ ಪರಿಹಾರವಾಗಿ 3 ತಿಂಗಳೊಳಗಾಗಿ ನೀಡುವಂತೆ, ಒಂದು ವೇಳೆ ಪರಿಹಾರವನ್ನು ನೀಡದೇ ಇದ್ದಲ್ಲಿ 5 ವರ್ಷದ ಕಾರಾಗೃಹ ವಾಸದ ಶಿಕ್ಷೆ ಅನುಭವಿಸುವಂತೆ ಆದೇಶಿಸಿ ಫೆ.26 ರಂದು ತೀರ್ಪು ನೀಡಿದ್ದಾರೆ.
ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾಗಿ ನಾಗಲಕ್ಷಿö್ಮÃ ಎಸ್. ಅವರು ವಾದ ಮಂಡಿಸಿದ್ದರು. ಗಂಗಾವತಿ ಗ್ರಾಮೀಣ ಠಾಣೆಯ ಪೊಲೀಸ್ ಸಿಬ್ಬಂದಿಯಾದ ವೆಂಕಟೇಶ ಮತ್ತು ಬಸವರಾಜ ಅವರು ಪ್ರಕರಣದ ವಿಚಾರಣೆ ಸಮಯದಲ್ಲಿ ಸಾಕ್ಷಿಗಳನ್ನು ಸಮಯಕ್ಕೆ ಸರಿಯಾಗಿ ಹಾಜರುಪಡಿಸಿ ಸಹಕಾರ ನೀಡಿದ್ದಾರೆ ಎಂದು ಗಂಗಾವತಿಯ 1ನೇ ಸರ್ಕಾರಿ ಅಭಿಯೋಜಕರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!
%d bloggers like this: