ಬಡವರ ಬದುಕಿಗೆ ನೆಮ್ಮದಿ ನೀಡಿದ ಗ್ಯಾರಂಟಿ ಯೋಜನೆಗಳು-ಕೆ. ಬಸವರಾಜ ಹಿಟ್ನಾಳ

Get real time updates directly on you device, subscribe now.

ಕೊಪ್ಪಳ : ೨೭ ರಾಜ್ಯದ ಕಾಂಗ್ರೆಸ್ ಸರ್ಕಾರವು ಜನತೆಗೆ ಚುನಾವಣೆ ಪೂರ್ವದಲ್ಲಿ ನೀಡಿದ ಗ್ಯಾರಂಟಿಗಳ ಬಗ್ಗೆ ವಾಗ್ದಾನ ನೀಡಿದ  ಮುಖ್ಯಮಂತ್ರಿ ಸಿದ್ದರಾಮಯ್ಯರವರು ಅಧಿಕಾರ ಸ್ವಿಕಾರ ಮಾಡಿ ೩ ತಿಂಗಳ ಅವಧಿಯಲ್ಲಿ ಸ್ತ್ರೀ ಶಕ್ತಿ, ಗೃಹ ಲಕ್ಷ್ಮೀ, ಗೃಹ ಜ್ಯೋತಿ ಹಾಗೂ ೫ಕೆಜಿ ಅಕ್ಕಿಯ ನೇರ ನಗದು ಜಮೆ ಹಾಗೂ ಯುವ ನಿಧಿ ಯೋಜನೆಯಗಳಿಂದ ಜನರು ಈ ಇಂತಹ ತೀರ್ವ ಬರಗಾಲದವು ಸಹ ನೆಮ್ಮದಿ ಜೀವನ ಮಾಡಲುಹೆಚ್ಚು ಸಹಕಾರಿಯಾಗಿವೆ ನುಡಿದಂತೆ ನಡೆದ ಮುಖ್ಯಮಂತ್ರಿಗಳು ಗ್ಯಾರಂಟಿ ಯೋಜನೆಗಳ ಜೊತೆಗೆ ದಾಖಲೆಯ ಸರ್ವಶೇಷ್ಟ ಬಜೆಟ್ ನೀಡಿರುವುದು ಎದುರಾಳಿಗಳಿಗೆ ನಿದ್ದೆಗೆಡಿಸಿದೆ ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತಿದೆ ಎಂದು ಹೇಳುತ್ತಿರುವುದು ಬಿಜೆಪಿ ಪಕ್ಷದವರು ಇಂದು ತಬ್ಬಿಬ್ಬಾಗಿದ್ದಾರೆ. ಪ್ರದಾನ ಮಂತ್ರಿ ಮೋದಿಯ ಸುಳ್ಳಿನ ಗ್ಯಾರಂಟಿಗಳನ್ನು ಮಾದ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಯತ್ತ್ತೆಚ್ಚವಾಗಿ ಬಿಂಬಿಸುತ್ತಿದ್ದಾರೆ. ಸುಳ್ಳಗಳನ್ನು ಬಂಡವಾಳವಾಗಿ ಮಾಡಿಕೊಂಡು ಅಧಿಕಾರ ಹಿಡಿದಿದ್ದ ಪ್ರಧಾನ ಮಂತ್ರಿ ಮೊದಿಯವರು ಸೋಲಿನ ಅರಿವಾಗಿದ್ದು ೨೦೨೪ ಲೋಕಸಭಾ ಚುನಾವಣೆ ಪೂರ್ವದಲ್ಲಿ ೪೦೦ ಸಿಟುಗಳು ಬರುತ್ತವೆರ ಎಂದು ಜನರಿಗೆ ಮಂಕುಬೂದಿ ಎರಚುತ್ತಿದ್ದಾರೆ ದೇಶ ಹಾಗೂ ರಾಜ್ಯದ ಜನತೆಗೆ ಜನಪರ ಕಲ್ಯಾಣಕ್ಕಾಗಿ ಯೋಜನೆಗಳನ್ನು ಕೊಡುವ ಕಾಂಗ್ರೆಸ್ ಸರ್ಕಾರಕ್ಕೆ ಬಹುಮತ ನೀಡುವುದು ಖಚಿತವಾಗಿದೆ. ರಾಜ್ಯದಲ್ಲಿ ೨೦-೨೫ಸೀಟುಗಳು ಗೆಲ್ಲುವುದು ನಿಶ್ಚಿತವೆಂದು ಕಡಾಖಂಡಿತವಾಗಿ ಹೇಳಿ, ಕಾಂಗ್ರೆಸ್ ಕಾರ್ಯಕರ್ತರಿಗೆ ರಾಜ್ಯ ಸರ್ಕಾರವು ನೀಡುವ ಮಹತ್ವಾಂಕ್ಷೆ ಗ್ಯಾರಂಟಿ ಯೋಜನೆಗಳನ್ನು ಮನೆ ಮನೆಗೆ ತಿರುಗಿ ಯೋಜನೆಗಳನ್ನು ಪಡೆದ ಮಹಿಳೆರಿಗೆ ಬೇಟಿ ನೀಡಿ ಅಭಿಪ್ರಾಯ ಸಂಗ್ರಹಿಸಿ ಬರುವ ಲೋಕಸಭಾ ಚುನಾವಣೆಯಲ್ಲಿ ಮತವಾಗಿ ಪರಿವರ್ತಿಸಿಲು ಕಾಂಗ್ರೆಸ್ ಮುಖಂಡರಿಗೆ ಮತ್ತು ಕಾರ್ಯಕರ್ತರಿಗೆ ಕರೆ ನೀಡಿದರು.

ಈ ಸಂದಂರ್ಭದಲ್ಲಿ  ಮಾಜಿ ಜಿ.ಪಂ ಅಧ್ಯಕ್ಷ ರಾಜಶೇಖರ ಹಿಟ್ನಾಳ ಮಾಜಿ ಜಿಪಂ ಸದಸ್ಯರ ಗೂಳಪ್ಪ ಹಲಗೆರಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಬಾಲಚಂದ್ರನ್ ಮುಖಂಡರಾದ ಗ್ಯಾರಂಟಿ ಯೋಜನೆ ಸದಸ್ಯೆ ಜ್ಯೋತಿ ಗೊಂಡಬಾಳ ತೋಟಪ್ಪ ಕಾಮನೂರು, ನಾಗರಾಜ ಚಳ್ಳೂಳ್ಳಿ ರಾಜುರೆಡ್ಡಿ ಕೃಷ್ಣರೆಡ್ಡಿ ಗಲಬಿ ಸುಬ್ಬಣ್ಣಚಾರ್ಯ ಗಿಣಗೇರಾ ಚಾಂದಪಾಷ ಕಿಲ್ಲೇದಾರ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ ಪಾಷ ಪಲ್ಟನ್ ಆನಂದ ಕಿನ್ನಾಳ ಹಾಗೂ ಇನ್ನೀತರರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: