ಎರಡನೆಯ ದಿನ ೧೯೯ ಜನರ ರಕ್ತದಾನ

Get real time updates directly on you device, subscribe now.

ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದಲ್ಲಿ ದಿನಾಂಕ ೨೭/೦೧/೨೦೨೪ರಿಂದ೩೦/೦೧/೨೦೨೪ರವರೆಗೆ ೦೪ ದಿನಗಳ ಕಾಲ ಶ್ರೀ ಜಗದ್ಗುರು ಗವಿಸಿದ್ಧೇಶ್ವರ ಆಯುರ್ವೇದಿಕ ಮಹಾವಿದ್ಯಾಲಯ ಹಾಗೂಭಾರತೀಯರೆಡ್‌ಕ್ರಾಸ್ ಸಂಸ್ಥೆ, ಜಿಲ್ಲಾಘಟಕ, ಕೊಪ್ಪಳ ಇವರ ಸಹಯೋಗದೊಂದಿಗೆ ಶ್ರೀ ಜಗದ್ಗುರು ಗವಿಸಿದ್ಧೇಶ್ವರ ಆಯುರ್ವೇದಿಕ ಮಹಾವಿದ್ಯಾಲಯದಲ್ಲಿ’ರಕ್ತದಾನ ಶಿಬಿರ’ವನ್ನು ಬೆಳೆಗ್ಗೆ ೦೯:೦೦ ಗಂಟೆಯಿಂದ ಸಾಯಂಕಾಲ ೦೫:೦೦ ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ. ಹಾಗೂ ೨೭/೦೧೧೨೦೨೪ ರಿಂದ ೦೯/೦೧/೨೦೨೪ವರೆಗೆ ಸಂಚಾರಿರಕ್ತ ಸಂಗ್ರಹಣಾ ವಾಹನದಲ್ಲಿರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ನಿನ್ನೆಎರಡನೆಯ ದಿನವಾದ ದಿನಾಂಕ ೨೮.೦೧.೨೦೨೪ರಂದು ಶ್ರೀ ಜಗದ್ಗುರು ಗವಿಸಿದ್ಧೇಶ್ವರ ಆಯುರ್ವೇದಿಕ ಮಹಾವಿದ್ಯಾಲಯದಲ್ಲಿ ೧೨೧ ಮತ್ತು ಸಂಚಾರಿ ವಾಹನದಲ್ಲಿ ೭೮ ಒಟ್ಟು ೧೯೯ ಜನರುರಕ್ತದಾನ ಮಾಡಿದರುಎಂದು ಶ್ರೀ ಗವಿಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 

Get real time updates directly on you device, subscribe now.

Comments are closed.

error: Content is protected !!
%d bloggers like this: