ಸುಳ್ಳು ಸಾಕ್ಷಿ ಹೇಳಿದ್ದರಿಂದ ದೂರುದಾರರ ಮೇಲೆ ಕ್ರಮ

Get real time updates directly on you device, subscribe now.

ನ್ಯಾಯಾಲಯದಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ದೂರುದಾರರು ಪ್ರತಿಕೂಲ ಸುಳ್ಳು ಸಾಕ್ಷಿ ಹೇಳಿದ್ದರಿಂದ ಅವರ ವಿರುದ್ದ ಸಿ.ಆರ್.ಪಿ.ಸಿ ಕಲಂ 340 ರ ಪ್ರಕಾರ ದೂರನ್ನು ಕಲಂ 193 ಐ.ಪಿ.ಸಿ. ರಡಿಯಲ್ಲಿ ದಾಖಲಿಸಲು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮುಖ್ಯಾ ಆಡಳಿತಾಧಿಕಾರಿಗಳಿಗೆ ನಿರ್ದೇಶನ ನಿಡಲಾಗಿದೆ.

ಮುಂದುವರೆದು, ನ್ಯಾಯಾಲಯದಲ್ಲಿ ಪ್ರತಿಕೂಲ ಸುಳ್ಳು ಸಾಕ್ಷಿ ಹೇಳಿದ್ದರಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ಪ್ರತಿಬಂಧ) ಕಾಯ್ದೆಯಡಿಯಲ್ಲಿ ಸರಕಾರದಿಂದ ಪಡೆದ ಪರಿಹಾರದ ಮೊತ್ತ 25,000 ರೂ.ಗಳನ್ನು ಸಹ ದೂರುದಾರರಿಂದ ಕೂಡಲೇ ವಸೂಲಿ ಮಾಡಲು ಜಿಲ್ಲಾಧಿಕಾರಿಗಳಿಗೆ ನ್ಯಾಯಾಲಯವು ನಿರ್ದೇಶನ ನೀಡಲಾಗಿದೆ ಎಂದು ಕೊಪ್ಪಳದ ಸಾರ್ವಜನಿಕ ಅಭಿಯೋಜಕರು ತಿಳಿಸಿದ್ದಾರೆ.
ಪ್ರಕರಣ ಏನು?: ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕೊಪ್ಪಳದಲ್ಲಿ ದೂರುದಾರರು ದಿ:13.05.2020ರಂದು ಸರಕಾರಿ ಕರ್ತವ್ಯದಲ್ಲಿದಾಗ ವ್ಯಕ್ತಿಯೊಬ್ಬರು ಕೃಷಿ ಯೋಜನೆಗಳ ಮಾಹಿತಿ ಕೇಳಲು ಕಚೇರಿಗೆ ಭೇಟಿ ನೀಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಸರಕಾರಿ ಕರ್ತವ್ಯವನ್ನು ನಡೆಸಲು ಅಡಚಣೆ ಮಾಡಿದ್ದರಿಂದ ಆ ವ್ಯಕ್ತಿಯ ವಿರುದ್ದ ದೂರುದಾರರು ಕೊಪ್ಪಳ ನಗರ ಠಾಣೆಯಲ್ಲಿ ದೂರನ್ನು ನೀಡಿದ್ದು ನಂತರ ತನಿಖಾಧಿಕಾರಿಯಾದ ಡಿ.ವೈ.ಎಸ್.ಪಿ ಅವರು ನ್ಯಾಯಾಲಯಕ್ಕೆ ವಿಶೇಷ (ಎಸ್.ಸಿ/ಎಸ್.ಟಿ) ಕಲಂಗಳ ಅಡಿಯಲ್ಲಿ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರಿಂದ ನ್ಯಾಯಾಲಯದಲ್ಲಿ ವಿಶೇಷ(ಎಸ್.ಸಿ ಎಸ್.ಟಿ) ಪ್ರಕರಣ ಸಂಖ್ಯೆ 20/2020 ಎಂದು ದಾಖಲಾಗಿತ್ತು.
ನಂತರ ವಿಚಾರಣೆಯ ವೇಳೆಯಲ್ಲಿ ದೂರುದಾರರು ತಾವು ನೀಡಿದ್ದ ದೂರಿನ ವಿರುದ್ದ ನ್ಯಾಯಾಲಯದಲ್ಲಿ, ಆರೋಪಿಯು ಗೊತ್ತಿರುವುದಿಲ್ಲ, ನೋಡಿಲ್ಲ, ಅವನು ಜಾತಿ ನಿಂದನೆ ಮಾಡಿರುವುದಿಲ್ಲ, ಕರ್ತವ್ಯಕ್ಕೆ ಅಡಚಣೆ ಮಾಡಿರುವುದಿಲ್ಲ ಹಾಗೂ ದೂರು ಕೊಟ್ಟಿರುವುದಿಲ್ಲ ಎಂದು ಪ್ರತಿಕೂಲ ಸುಳ್ಳು ಸಾಕ್ಷಿ ನುಡಿದಿದ್ದರು. ಈ ಪ್ರಕರಣದಲ್ಲಿ ಆರೋಪಿಯನ್ನು 21.12.2023 ರಂದು ಖುಲಾಸೆ ಮಾಡಲಾಗಿದೆ ಎಂದು ಕೊಪ್ಪಳದ ಸಾರ್ವಜನಿಕರ ಅಭಿಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!
%d bloggers like this: