ಸಂಸದರಿಂದ ಕೆಬಿಜೆಎನ್‌ಎಲ್ ನೀರಾವರಿ ಯೋಜನೆಯಡಿ ಫಲಾನುಭವಿಗಳಿಗೆ ಮೋಟರ್ ಸಾಮಗ್ರಿ ವಿತರಣೆ

Get real time updates directly on you device, subscribe now.

 ಕೃಷ್ಣ ಭಾಗ್ಯ ಜಲ ನಿಗಮ ಇಲಾಖೆಯ 2021-22 ನೇ ಸಾಲಿನ ನೀರಾವರಿ ಯೋಜನೆಯಡಿಯಲ್ಲಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಒಟ್ಟು 56 ಫಲಾನುಭವಿಗಳಿಗೆ ಮೋಟರ್ ಸಲಕರಣೆಗಳು ಹಾಗೂ ಸಾಮಗ್ರಿಗಳು ಮಂಜೂರಾಗಿದ್ದು, ಗುರುವಾರದಂದು ಬೇವಿನಾಳ ಗ್ರಾಮದಲ್ಲಿ ಸಂಸದರಾದ ಸಂಗಣ್ಣ ಕರಡಿ ಅವರು ಸಾಂಕೇತಿಕವಾಗಿ ಮೋಟರ್ ಸಲಕರಣೆ ಹಾಗೂ ಸಾಮಗ್ರಿಗಳನ್ನು ವಿತರಿಸಿದರು.
ನೀರಾವರಿ ಯೋಜನೆಯು ಟರ್ನ ಕೀ ಆಧಾರಿತ ಯೋಜನೆಯಾಗಿದ್ದು, ಬೋರ್‌ವೆಲ್ ಕೊರೆಯಿಸುವುದರ ಜೊತೆಗೆ ಮೋಟರ್ ಸಾಮಗ್ರಿಗಳು, ವಿದ್ಯುದೀಕರಣ, ಪೈಪ್‌ಲೈನ್ ಕಾಮಗಾರಿ ಸೇರಿದಂತೆ ಪ್ರತಿ ಫಲಾನುಭವಿಗೂ ಪ್ರತ್ಯೇಕ ವಿದ್ಯುತ್ ಪರಿವರ್ತಕಗಳನ್ನು ಒದಗಿಸುವುದು ಯೋಜನೆಯ ಉದ್ದೇಶವಾಗಿದೆ. ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಟಿ.ಎಸ್.ಪಿ. ಯೋಜನೆಯಡಿ 25 ಹಾಗೂ ಎಸ್.ಸಿ.ಪಿ. ಯೋಜನೆಯಡಿ 31 ಫಲಾನುಭವಿಗಳು ಒಟ್ಟು 56 ಫಲಾನುಭವಿಗಳು ಯೋಜನೆಯ ಲಾಭವನ್ನು ಪಡೆದುಕೊಂಡಿರುತ್ತಾರೆ.
ಈ ಸಂದರ್ಭದಲ್ಲಿ ಫಲಾನುಭವಿಗಳು ಹಾಗೂ ಮುಖಂಡರು, ಕೆ.ಬಿ.ಜೆ.ಎನ್.ಎಲ್. ಅಧಿಕಾರಿಗಳು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: