ಮೇ-೧ ಕಾರ್ಮಿಕ ದಿನಾಚರಣೆಯಂದು ಸಿ.ಐ.ಟಿ.ಯು ನೂತನ ಪ್ರಣಾಳಿಕೆ

0

Get real time updates directly on you device, subscribe now.

ಗಂಗಾವತಿ: ವ್ಯವಸ್ಥಿತ ಬಿಕ್ಕಟ್ಟಿನಲ್ಲಿ ಮುಳುಗಿರುವ ನವ ಉದಾರವಾದಿ ಬಂಡವಾಳಶಾಹಿ ವ್ಯವಸ್ಥೆಯ ಆಕ್ರಮಣಕಾರಿ ದಾಳಿಯ ವಿರುದ್ಧ ಮತ್ತು ಕ?ಪಟ್ಟು ಗಳಿಸಿದ ಹಕ್ಕುಗಳನ್ನು ರಕ್ಷಿಸಲು ಸಮರಧೀರವಾಗಿ ಹೋರಾಡುತ್ತಿರುವ ವಿಶ್ವದ ದುಡಿಯುವ ಜನರಿಗೆ ಸಿಐಟಿಯು ಕ್ರಾಂತಿಕಾರಿ ಶುಭಾಶಯಗಳನ್ನು ಕೋರುತ್ತಾ, ಮೇ-೧ ಗುರುವಾರ ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯಂದು ಸಿಐಟಿಯು ದುಡಿಯುವ ವರ್ಗದ ಅಂತರರಾಷ್ಟ್ರೀಯತೆಗೆ ತನ್ನ ಬದ್ಧತೆಯನ್ನು ಹೊಂದಿ ಶೋ?ಣೆ, ತಾರತಮ್ಯದ ವಿರುದ್ಧ, ಶಾಂತಿ ಮತ್ತು ಸಾಮರಸ್ಯಕ್ಕಾಗಿ ಎಲ್ಲಾ ದುಡಿಯುವ ಜನರ ಹೋರಾಟಗಳಲ್ಲಿ ಅವರೊಂದಿಗೆ ಒಗ್ಗೂಡಿ ನೂತನ ಪ್ರಣಾಳಿಕೆಯನ್ನು ತಂದಿದೆ ಎಂದು ಸಿ.ಐ.ಟಿ.ಯು.ನ ಜಿಲ್ಲಾಧ್ಯಕ್ಷರಾದ ನಿರುಪಾದಿ ಬೆಣಕಲ್ ಪ್ರಕಟಣೆಯಲ್ಲಿ ತಿಳಿಸಿದರು.
ಅವರು ಮೇ-೦೧ ವಿಶ್ವ ಕಾರ್ಮಿಕ ದಿನಾಚರಣೆ ಕಾರ್ಯಕ್ರಮವನ್ನು ನಗರದ ಶ್ರೀ ಚನ್ನಬಸವ ಕಲಾಮಂದಿರದಲ್ಲಿ ಆಯೋಜಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಸಿಯೂಟ ಸಂಘಟನೆಯ ರಾಜ್ಯಾಧ್ಯಕ್ಷರಾದ ಲಕ್ಷ್ಮೀದೇವಿ ಸೋನಾರ್ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಸಿ.ಐ.ಟಿ.ಯು ರಾಜ್ಯ ಅಧ್ಯಕ್ಷರಾದ ಎಸ್. ವರಲಕ್ಷ್ಮಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕೇಂದ್ರ ಕಾರ್ಮಿಕ ಸಂಘಗಳು ಮತ್ತು ಸ್ವತಂತ್ರ ವಲಯ ಒಕ್ಕೂಟಗಳ ಜಂಟಿ ವೇದಿಕೆಯಡಿಯಲ್ಲಿ ೨೦೨೫ರ ಮೇ ೨೦ ರಂದು ನಡೆಯಲಿರುವ ಅಖಿಲ ಭಾರತ ಸಾರ್ವತ್ರಿಕ ಮು?ರಕ್ಕೆ ಸಜ್ಜಾಗುತ್ತಿರುವ ಭಾರತದ ಕಾರ್ಮಿಕ ವರ್ಗವನ್ನು ಸಿಐಟಿಯು ಅಭಿನಂದಿಸುತ್ತದೆ. ಈ ಮು?ರವು ದುಡಿಯುವ ಜನರ ಹಕ್ಕುಗಳು ಮತ್ತು ಜೀವನೋಪಾಯದ ಮೇಲೆ ಆಡಳಿತ ವರ್ಗಗಳ ಕ್ರೂರ ದಾಳಿಯ ವಿರುದ್ಧ ಭಾರತೀಯ ಕಾರ್ಮಿಕ ವರ್ಗದ ಅತಿದೊಡ್ಡ ಕ್ರಮವಾಗಲಿದೆ. ದೇಶದ ವರ್ಗ ಆಧಾರಿತ ಕಾರ್ಮಿಕ ಸಂಘವಾಗಿ, ಸಿಐಟಿಯು ಈ ಸಾರ್ವತ್ರಿಕ ಮು?ರವನ್ನು ಕಾರ್ಮಿಕ ವರ್ಗದ ನೇತೃತ್ವದಲ್ಲಿ ಹೊಸ ಹಂತದ ಪ್ರತಿದಾಳಿಯ ಆರಂಭವನ್ನಾಗಿ ಮಾಡುವ ಐತಿಹಾಸಿಕ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಇಂದಿನ ಹೋರಾಟವು ರಾಷ್ಟ್ರೀಯ ಆರ್ಥಿಕತೆಯ ಮೇಲಿನ ಕಾರ್ಪೊರೇಟ್ ಲೂಟಿಯ ವಿರುದ್ಧವಾಗಿದೆ; ಇದು ದುಡಿಯುವ ಜನರ ಮೂಲಭೂತ ಪ್ರಜಾಪ್ರಭುತ್ವ, ಸಾಂವಿಧಾನಿಕ ಮತ್ತು ಕ?ಪಟ್ಟು ಗೆದ್ದ ಕೆಲಸದ ಸ್ಥಳದಲ್ಲಿನ ಹಕ್ಕುಗಳ ಮೇಲಿನ ದಾಳಿಯ ವಿರುದ್ಧವಾಗಿದೆ. ಸಾಮ್ರಾಜ್ಯಶಾಹಿ ಮತ್ತು ಬಲಪಂತೀಯ ನವ-ಫ್ಯಾಸಿಸ್ಟ್ ರಾಜಕೀಯ ಶಕ್ತಿಗಳ ವಿರುದ್ಧ ವಿವಿಧ ರಾಷ್ಟ್ರಗಳಲ್ಲಿ ದಿಟ್ಟ ಹೋರಾಟಗಳನ್ನು ಸಂಘಟಿಸಿದ್ದಕ್ಕಾಗಿ ವಿಶ್ವ ಕಾರ್ಮಿಕ ಸಂಘಗಳ ಒಕ್ಕೂಟದ (ಡಬ್ಲ್ಯು.ಎಫ್.ಟಿ.ಯು) ನೇತೃತ್ವದಲ್ಲಿ ಅಂತರರಾಷ್ಟ್ರೀಯ ವರ್ಗಾಧಾರಿತ ಕಾರ್ಮಿಕ ವರ್ಗ ಚಳುವಳಿಯನ್ನು ಸಿಐಟಿಯು ಬೆಂಬಲಿಸುತ್ತದೆ ಮತ್ತು ಅಭಿನಂದಿಸುತ್ತದೆ. ಸಮಾಜವಾದದ ಧ್ವಜವನ್ನು ಎತ್ತರಕ್ಕೆ ಎತ್ತಿ ಹಿಡಿದಿದ್ದಕ್ಕಾಗಿ ಚೀನಾ, ಕ್ಯೂಬಾ, ವಿಯೆಟ್ನಾಂ, ಲಾವೋಸ್ ಮತ್ತು ಉತ್ತರ ಕೊರಿಯಾದ ಸಮಾಜವಾದಿ ದೇಶಗಳ ಕಾರ್ಮಿಕ ವರ್ಗವನ್ನು ಸಿಐಟಿಯು ಅಭಿನಂದಿಸುತ್ತದೆ. ಸಮಾಜವಾದಿ ರಾಷ್ಟ್ರಗಳು ಹಾಗೂ ಸಮಾಜವಾದವನ್ನು ರಕ್ಷಿಸಲು, ಸಾಮ್ರಾಜ್ಯಶಾಹಿ ಕುತಂತ್ರಗಳನ್ನು ವಿರೋಧಿಸುತ್ತಾ ತಮ್ಮ ಜನರ ಜೀವನ ಮಟ್ಟವನ್ನು ಸುಧಾರಿಸಲು ತಮ್ಮ ಕೈಲಾದ? ಪ್ರಯತ್ನಿಸುತ್ತಿವೆ. ಈ ನಿಟ್ಟಿನಲ್ಲಿ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಸಿ.ಐ.ಟಿ.ಯು ಹೋರಾಟದಲ್ಲಿ ಹೊಸ ಪ್ರಣಾಳಿಕೆಯನ್ನು ತಂದಿದೆ ಎಂದರು.
ಕಾರ್ಯಕ್ರಮದ ನಿರ್ವಹಣೆಯನ್ನು ಸಿ.ಐ.ಟಿ.ಯು ತಾಲೂಕ ಕಾರ್ಯದರ್ಶಿ ಮಂಜುನಾಥ ಡಗ್ಗಿ ಅಚ್ಚುಕಟ್ಟಾಗಿ ನಡೆಸಿದರು. ಈ ಸಂದರ್ಭದಲ್ಲಿ ಸಿ.ಐ.ಟಿ.ಯು ನ ನೂರಾರು ಸದಸ್ಯರು ಪಾಲ್ಗೊಂಡಿದ್ದರು.

Get real time updates directly on you device, subscribe now.

Leave A Reply

Your email address will not be published.

error: Content is protected !!