ಹಿರಿಯ ಪತ್ರಕರ್ತ ಅಲ್ಲಾವುದ್ದೀನ ಯಮ್ಮಿ ಅವರ ಶ್ರಮ ಸಾರ್ಥಕತೆ ಪಡೆದುಕೊಂಡಿದೆ : ನಾಗರಾಜ್ ಬೆಣಕಲ್

Get real time updates directly on you device, subscribe now.

ಹಿರಿಯ ಪತ್ರಕರ್ತ ಅಲ್ಲಾವುದ್ದೀನ ಯಮ್ಮಿ ಅವರು ರಾಜ್ಯ ಮಟ್ಟದ ಕಾರ್ಯನಿರತ ಪತ್ರಕರ್ತರ ಸಂಘದ ಕೆ ಯೂಡ್ಬ್ಲೂಜೆ 2025 ರ  ವಿಶೇಷ ದತ್ತಿ ನಿಧಿ ಪ್ರಶಸ್ತಿ ಪುರಸ್ಕೃತರಾಗಿದ್ದಕ್ಕೆ ತುಂಬಾ ಸಂತಸವಾಗಿದೆ. ಅಲ್ಲಾವುದ್ದೀನ ಯಮ್ಮಿ ಅವರ ಶ್ರಮಕ್ಕೆ ಸಿಕ್ಕ ಪ್ರತಿಫಲವಾಗಿ, ಅವರ ಸಾರ್ಥಕತೆ ಪಡೆದುಕೊಂಡಿದೆ ಎಂದು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ಬೆಣಕಲ್ ನುಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಕೊಡಮಾಡುವ 2025 ರ ವಿಶೇಷ ದತ್ತಿ ನಿಧಿ ಪ್ರಶಸ್ತಿಗೆ ಪುರಸ್ಕೃತರಾದ ಹಿರಿಯ ಪತ್ರಕರ್ತ ಅಲ್ಲಾವುದ್ದೀನ ಯಮ್ಮಿ ಅವರಿಗೆ ಕುಕನೂರು ತಾಲ್ಲೂಕ ಕಾರ್ಯನಿರತ ಪತ್ರಕರ್ತರ ಸಂಘ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಅಲ್ಲಾವುದ್ದೀನ ಯಮ್ಮಿ ಅವರ ಬರಹ ಮತ್ತು ಅಂಕಣಗಳು ಮೌಲಿಕವಾದವುಗಳು ಎಂದರು.

ಕಾರ್ಯ ನಿರತ ಪತ್ರಕರ್ತರ ಸಂಘದ ಜಿಲ್ಲಾ ಗ್ರಾಮೀಣ ಉಪಾಧ್ಯಕ್ಷ ಮಂಜುನಾಥ್ ಅಂಗಡಿ ಮಾತನಾಡಿ ಹಿರಿಯ ಪತ್ರಕರ್ತ ಅಲ್ಲಾವುದ್ದೀನ ಯಮ್ಮಿ ಅವರು ಪತ್ರಿಕೋದ್ಯಮ ದಲ್ಲಿ ತಮ್ಮನ್ನು ಅರ್ಪಿಸಿಕೊಂಡು ಸಮಾಜದ ಏಳಿಗೆಗಾಗಿ ಶ್ರಮಿಸಿದ್ದಾರೆ
ಎಂದ ಅವರು ನಾವು ಇನ್ನೂ ಪತ್ರಿಕೆಗೆ ಬಂದಿರಲಿಲ್ಲ ಆದರೆ ಅಲ್ಲಾವುದ್ದೀನ ಯಮ್ಮಿ ಅವರು ಅಂದಿನ ದಿನ ಮಾನಗಳಲ್ಲೇ ತಮ್ಮ ಪತ್ರಿಕೋದ್ಯಮ ದ ಮೂಲಕ ಪ್ರವರ್ಧಮಾನಕ್ಕೆ ಬಂದವರು ಎಂದರು. ಅವರಿಗೀಗ 56 ರ ಹರೆಯದ ವಯಸ್ಸು, ಅವರು ನೂರ್ಕಾಲ ಬಾಳಲಿ ಇದೇ ವೇದಿಕೆಯಲ್ಲಿ ಅವರಿಗೆ ನೂರು ವರ್ಷ ಹುಟ್ಟು ಹಬ್ಬದ ಸಂಭ್ರಮಾಚರಣೆ ಮಾಡೋಣ ಎಂದು ಆಶಿಸಿದರು. ಹಿರಿಯ ಪತ್ರಕರ್ತರ ಮಾರ್ಗದರ್ಶನ ಇಂದಿನ ಯುವ ಪತ್ರಕರ್ತರಿಗೆ ಅವಶ್ಯಕವಿದೆ. ಅವರ ಅನುಭವದ ಸಾರ ಯುವ ಪೀಳಿಗೆ ತೊಡಗಿಸಿಕೊಳ್ಳಲಿ ಎಂದರು.

ಹಿರಿಯ ಪತ್ರಕರ್ತ ಬಸವರಾಜ ಕೊಡ್ಲಿ ಮಾತನಾಡಿ ಪತ್ರಕರ್ತ ಅಲ್ಲಾವುದ್ದೀನ ಯಮ್ಮಿ ಅವರು ತಮ್ಮ ಬದುಕಿನುದ್ದಕ್ಕೂ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ, ಅನೇಕ ಪುಸ್ತಕಗಳನ್ನು ಬರೆದಿದ್ದಾರೆ, ತಮ್ಮ ವರದಿಗಾರಿಕೆಯೊಂದಿಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ಕ್ರಿಯಾಶೀಲತೆ ಮೆರೆದಿದ್ದಾರೆ.
ಅವರು ಎಂದಿಗೂ ಜಾತಿಯ ಹಿಂದೆ ಬಿದ್ದವರಲ್ಲ, ಶ್ರೀ ಗವಿಸಿದ್ದೇಶ್ವರ ಶ್ರೀಗಳ ಪ್ರವಚನ,ನಾಗಾ ಸಾಧು ಅದೊಂದು ವಿಸ್ಮಯ ಲೋಕ ಕೃತಿ ರಚಿಸುವ ಮೂಲಕ ಭಾವೈಕ್ಯತೆಯ ಸಂಕೇತವಾಗಿದ್ದಾರೆ ಇಂಥ ಮಹನೀಯರಿಗೆ ಹೆಚ್ಚು ಹೆಚ್ಚು ಪ್ರಶಸ್ತಿಗೆ ಭಾಜನರಾಗಲಿ ಎಂದರು.
ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಬಸವರಾಜ ಕೊನಾರಿ, ಅಮರೇಶ್ವರ ಸ್ವಾಮಿ ಕಂದಗಲ್ ಮಠ,ವಿರೇಶ್ ಇಟಗಿ,ಮುರಾರಿ ಭಜಂತ್ರಿ, ಕನಕರಾಯ ಭಜಂತ್ರಿ, ಮಂಜುನಾಥ ಪ್ರಸಾದ್,  ಚಂದ್ರು ಆರ್ ಬೆರಳೀನ್, ಚಂದ್ರಕಾಂತ ದೊಡ್ಡಮನಿ, ಬಸವರಾಜ ಬೀಡ್ನಾಳ, ಬಸವರಾಜ ಕೊಪ್ಪದ, ಶಿವರಾಜ ದೊಡ್ಡಮನಿ, ಮುಂತಾದವರು ಉಪಸ್ಥಿತರಿದ್ದರು ಪತ್ರಕರ್ತ ರುದ್ರೇಶ್ ಆರ್ ಬೆರಳೀನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 

ನಾನು ಪೆನ್ನು ಮಾರಿಕೊಳ್ಳಲಿಲ್ಲ…!
———————————————
1990, 95 ರ ದಶಕದಲ್ಲಿ ಆಗ ತಾನೇ ಭೂಮಿತಾಯಿಯ ಒಡಲು ಬಗೆದು ಕಲ್ಲು ಕೊರೆಯುವ ಸಾಹಸಕ್ಕೆ ಕೈ ಹಾಕುತ್ತಿರುವವರ ಕುರಿತು ಲೇಖನ, ಕವನ ಬರೆದು ಪತ್ರಿಕೆಗಳಿಗೆ ಕಳುಹಿಸುತಿದ್ದೆ , ಆಗ ಹಲವಾರು ಜನರು ನನ್ನ ವಿರುದ್ಧ ಸಿಡಿದು ಬೀಳುತ್ತಿದ್ದರು, ಒಂದಿಷ್ಟು ಜನ ರಾಜಿ ಸಂಧಾನಕ್ಕೂ ಬಂದರು ನೋಡಿ?
ಯಾವುದೇ ಕಾರಣಕ್ಕೂ ಪೆನ್ನು ಮಾರಿಕೊಳ್ಳಲಿಲ್ಲ….!
ಕಾಲ ಬದಲಾದಂತೆಲ್ಲ ಕಲ್ಲು ಗಣಿಗಾರಿಕೆಗೆ ಸರ್ಕಾರ ಅನುಮತಿ ನೀಡತೊಡಗಿತು, ಕಲ್ಲು ಗಣಿಗಾರಿಕೆ ವಿರುದ್ಧ ಜನಾಂದೋಲನ ಮಾಡಬೇಕೆನ್ನುವ ನನ್ನ ಕನಸು, ಕನಸಾಗಿಯೇ ಉಳಿಯಿತು…!

Get real time updates directly on you device, subscribe now.

Comments are closed.

error: Content is protected !!