ಅಭಿನಂದನಾ ಗ್ರಂಥ ಲೇಖನಗಳ ಆಹ್ವಾನ

Get real time updates directly on you device, subscribe now.

ಲೇಖನಗಳ ಆಹ್ವಾ

ಕೊಪ್ಪಳ: ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ತಿಮ್ಮಾರಡ್ಡಿ ಮೇಟಿಯವರು ಜುಲೈ 31ರಂದು ಸರ್ಕಾರಿ ಸೇವಾ ನಿವೃತ್ತಿ ಹೊಂದಲಿದ್ದು, ಅವರ ಬದುಕಿನ, ವೃತ್ತಿ ಜೀವನದ ವಿವಿಧ ಹಂತ, ಬೆಳವಣಿಗೆಗಳ ಕುರಿತಂತೆ ಅಭಿನಂದನಾ ಗ್ರಂಥ ಹೊರತರಲಾಗುತ್ತಿದೆ ಎಂದು ಗ್ರಂಥ ಪ್ರಕಟಣಾ ಸಮಿತಿ ತಿಳಿಸಿದೆ.

ಈ ಕುರಿತು ಪ್ರಕಟಣೆ ನೀಡಿರುವ ಸಮಿತಿಯವರು, ಅಭಿನಂದನಾ ಗ್ರಂಥಕ್ಕೆ ಅವರ ಪರಿಚಯಸ್ಥರು, ಬಂಧು-ಬಳಗದವರು, ಸ್ನೇಹಿತರು, ಸಹೋದ್ಯೋಗಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರಿಂದ ಅವರ ಕುರಿತಂತೆ ಲೇಖನಗಳನ್ನು ಆಹ್ವಾನಿಸಿದ್ದಾರೆ. 500 ಪದಗಳ ಮಿತಿಯ ಲೇಖನಗಳನ್ನು ನುಡಿ ಇಲ್ಲವೇ ಯುನಿಕೋಡ್‌ನಲ್ಲಿ ಟೈಪ್ ಮಾಡಿ [email protected] ಮೇಲ್ ವಿಳಾಸಕ್ಕೆ ಕಳುಹಿಸಬಹುದು. ಜುಲೈ 2ರ ಸಂಜೆ 5-30ರೊಳಗೆ ಲೇಖನಗಳನ್ನು ಕಳುಹಿಸಲು ಕೋರಲಾಗಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಬಸವರಾಜ ಕರುಗಲ್ (9380605892), ಪ್ರಕಾಶಗೌಡ (9980910533), ಮಂಜುನಾಥ್ ಆರೆಂಟ್ನೂರು (9972363064), ಮಹಾಂತೇಶ ನೆಲಾಗಣಿ (9964811198), ಡಾ.ಪ್ರಕಾಶ್ ಬಳ್ಳಾರಿ (9481440085) ಇವರನ್ನು ಸಂಪರ್ಕಿಸಬಹುದು.

Get real time updates directly on you device, subscribe now.

Comments are closed.

error: Content is protected !!
%d bloggers like this: