ಹುಲಿಹೈದರ್ ಗ್ರಾಮದಲ್ಲಿ ನಮ್ಮ ಸಂಕಲ್ಪ, ವಿಕಸಿತ ಭಾರತ ಕಾರ್ಯಕ್ರಮ

Get real time updates directly on you device, subscribe now.

ಕನಕಗಿರಿ : ಕನಕಗಿರಿ ವಿಧಾನಸಭಾ ಕ್ಷೆತ್ರದ ಹುಲಿಹೈದರ್ ಗ್ರಾಮದಲ್ಲಿ ಕೇಂದ್ರಸರ್ಕಾರದ ನಮ್ಮ ಸಂಕಲ್ಪ, ವಿಕಸಿತ ಭಾರತ ಕಾರ್ಯಕ್ರಮವನ್ನು ಸಂಸದರಾದ ಸಂಗಣ್ಣ ಕರಡಿ ರವರು ಉದ್ಘಾಟಿಸಿದರು ..
ಈ ಕಾರ್ಯಕ್ರಮವು ಕೇಂದ್ರ ಸರ್ಕಾರದ ಕಾರ್ಯಕ್ರಮವಾಗಿದ್ದು, ಈ ಕಾರ್ಯಕ್ರಮ 10 ವರ್ಷದ ಕೇಂದ್ರ ಸರ್ಕಾರದ ಯೋಜನೆಯು ಬಡ ಜನರಿಗೆ ತಲುಪಿಸುವ ಕಾರ್ಯಕ್ರಮವಾಗಿರುತ್ತದೆ ..

ಆದ್ದರಿಂದ ಈ ಕಾರ್ಯಕ್ರಮವು ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಏರ್ಪಡಿಸಿ ಕೇಂದ್ರ ಸರ್ಕಾರದ ಯೋಜನೆಯ ಬಗ್ಗೆ ತಿಳುವಳಿಕೆ ಮಾಡಿ ಯೋಜನೆಯನ್ನು ಪಡೆದಿರುವಂತಹ ಜನಗಳು ಇದರ ಸದುಪಯೋಗದ ಬಗ್ಗೆ ಇನ್ನಷ್ಟು ಜನಗಳಿಗೆ ಮನವರಿಕೆ ಮಾಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
ಸಂದರ್ಭದಲ್ಲಿ ಕನಕಗಿರಿ ಕ್ಷೆತ್ರದ ಮಾಜಿ ಶಾಸಕರಾದ ಬಸವರಾಜ್ ದಡೆಸೂಗೂರು ರವರು ಮುಖಂಡರಾದ ಅಮರಪ್ಪ ಗದ್ದಿ, ರಾಜಾ ಶರತ್ ಚಂದ್ರ ನಾಯಕ,ಗುರುಮೂರ್ತಿಗೌಡ ಹುಲಿಹೈದರ್, ಜಿಲಾನಿ ಸಾಬ್,ಬಸವರಾಜ್ ಭೋವಿ, ಕನಕರಾಯ ಡ್ಯಾಗಿ,ಶ್ರೀಮತಿ ಹುಲಿಗೆಮ್ಮ ನಾಯಕ, ಗೊಸ್ಲೆಪ್ಪ ಗದ್ದಿ,ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರು ಸರ್ವ ಸದಸ್ಯರು ಹಾಗೂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು,ಬ್ಯಾಂಕ್ ಇಲಾಖೆ ಅಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಇನ್ನೂ ಅನೇಕರು ಉಪಸ್ಥಿತರಿದ್ದರು

Get real time updates directly on you device, subscribe now.

Comments are closed.

error: Content is protected !!
%d bloggers like this: