ಕಲ್ಯಾಣ ಕರ್ನಾಟಕ ೭ ಜನರಿಗೆ ರಾಜ್ಯ ಯುವ ಪ್ರಶಸ್ತಿ

ಕೊಪ್ಪಳ: ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು ದಕ್ಷಿಣ ಕನ್ನಡ ಜಿಲ್ಲಾ ಘಟಕದ ಆಶ್ರಯದಲ್ಲಿ ಕೊಡಮಾಡುವ ವಾರ್ಷಿಕ ಪ್ರತಿಷ್ಠಿತ ರಾಜ್ಯ ಯುವ ಪ್ರಶಸ್ತಿಗೆ ಕಲಬುರಗಿ ವಿಭಾಗದ ಏಳು ಜನರನ್ನು ಆಯ್ಕೆ ಮಾಡಲಾಗಿದೆ ಎಂದು ರಾಜ್ಯ ಅಧ್ಯಕ್ಷ ಎಸ್. ಬಾಲಾಜಿ ಮತ್ತು ಕಲಬುರಗಿ ವಿಭಾಗೀಯ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊಪ್ಪಳದ ಯುವ ಗಾಯಕಿ, ಕ್ರಾಂತಿಕಾರಿ ಯುವ ಹೋರಾಟಗಾರ್ತಿ ಗೌರಿ ಗೋನಾಳ, ಬಳ್ಳಾರಿ ಜಿಲ್ಲೆಯ ಹಿರಿಯ ಪ್ರತಿಭಾವಂತ ಪತ್ರಕರ್ತರು, ಗ್ಯಾರಂಟಿ ವಾಹಿನಿ ವರದಿಗಾರ ವೆಂಕಟೇಶ ಕುಲಕರ್ಣಿ, ವಿಜಯನಗರ ಜಿಲ್ಲೆಯ ಸಮಾಜ ಸೇವಕ ಎನ್. ವೆಂಕಟೇಶ (ಸ್ಲಂ ವೆಂಕಿ), ಕಲಬುರಗಿಯ ಕು. ಶ್ವೇತಾ ಕೆ., ಬೀದರ್ ಜಿಲ್ಲೆಯ ಕು. ಬಸವಜ್ಯೋತಿ, ಯಾದಗಿರಿಯ ಕು. ರೇಣುಕಾ ಮತ್ತು ರಾಯಚೂರಿನ ಭರಮರೆಡ್ಡಿ ಅವರು ಆಯ್ಕೆಯಾಗಿದ್ದು, ಜನೇವರಿ ೧೮ ರಂದು ಬೆಳಿಗ್ಗೆ ೯ ಗಂಟೆಗೆ ಸುಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಹತ್ತಿರದ ಸುಳ್ಯ ತಾಲೂಕಿನ ಪಂಜ ಗ್ರಾಮದ ಶ್ರೀ ಸದಾಶಿವ ಪರಿವಾರ ಪಂಚಲಿಂಗೇರ್ಶವರ ದೇವಸ್ಥಾನದ ವಠಾರದಲ್ಲಿ ನಡೆಯುವ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಮಾಡಲಾಗುತ್ತಿದೆ.
ಇದೇ ವೇದಿಕೆಯಲ್ಲಿ ೧೭ ರಂದು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುರೇಶ ಸೂಡಿಮುಳ್ಳ ನೇತೃತ್ವದಲ್ಲಿ ರಾಜ್ಯಮಟ್ಟದ ಯುವ ಸಂಭ್ರಮ, ಪಂಚಸಪ್ತತಿ ಪ್ರಶಸ್ತಿ ಪ್ರದಾನ ಹಾಗೂ ಜಾನಪದ ಗಾಯನ ಮತ್ತು ನೃತ್ಯ ಸ್ಪರ್ಧೆಗಳು ನಡೆಯಲಿದ್ದು ಹಲವಾರು ಗಣ್ಯರು, ಸ್ವಾಮೀಜಿಗಳು ಭಾಗವಹಿಸುತ್ತಿದ್ದಾರೆ. State Youth Award for Kalyana Karnataka 7 people
Comments are closed.