ಪಠ್ಯದ ಜೊತೆಗೆ ಸರ್ವಾಂಗೀಣ ವಿಕಾಸಕ್ಕೆ ಸಾಂಸ್ಕೃತಿಕ ಚಟುವಟಿಕೆ ಕಾರ್ಯಕ್ರಮಗಳು ಅವಶ್ಯವಾಗಿವೆ:  ಕರ್ಣಕುಮಾರ

Get real time updates directly on you device, subscribe now.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶ್ರೀ ಶರಣಬಸವೇಶ್ವರ ವಿದ್ಯಾಸಂಸ್ಥೆಯಲ್ಲಿ ಶುಕ್ರವಾರ ವಾರ ಕಾರಟಗಿಯಲ್ಲಿ ನಡೆದ ‘ಚಿಗುರು’ ಕಾರ್ಯಕ್ರಮವನ್ನು ಶರಣಬಸವೇಶ್ವರ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಸ್ . ಬಿ.ಶೆಟ್ಟರ್ ಹಾಗೂ ಪುರಸಭೆ ಅಧ್ಯಕ್ಷ ರೇಖಾ ರಾಜೇಶೇಖರ ಆನೆ ಹೊಸರು ಉದ್ಘಾಟಿಸಿದರು.ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶರಣಪ್ಪ ಕೋಟ್ಯಾಳ , ಚಂದ್ರಶೇಖರ ಸೋಮಲಾಪುರ ಇತರರು ಇದ್ದರು

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮವು ಬಾಲ ಪ್ರತಿಭೆಗಳ ಅನಾವರಣಕ್ಕೆ ವೇದಿಕೆಯಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎಸ್, ಬಿ, ಶೆಟ್ಟರ್ ಈ ನಾಡಿನ ಕಲೆ ಸಂಸ್ಕೃತಿ ಸಾಹಿತ್ಯ ಹಿರಿದಾಗಿದೆ ಹಾಗೂ ಬದುಕಿಗೆ ಬೇಕಾದ ಮಾನವೀಯತೆಯ ಮೌಲ್ಯ, ನೈತಿಕ ಬೆಳವಣಿಗೆ ಹಾಗೂ ದೈಹಿಕ ವಿಕಾಸಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು
ಇಂದಿನ ದಿನಗಳಲ್ಲಿ ಮಕ್ಕಳಿಗೆ ತುಂಬಾ ಅವಶ್ಯಕವಾಗಿವೆ ಎಂದರು
ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಮಾತನಾಡಿ ಪಠ್ಯಕ್ಕೆ ಸೀಮಿತವಾಗದೆ ಸೃಜನಶೀಲ ಪಠ್ಯೇತರ ಚಟುವಟಿಕೆಗಳ ಕಡೆಗೂ ಗಮನಹರಿಸಬೇಕು ಅಂದಾಗ ಮಾತ್ರ ಸರ್ವಾಂಗೀಣ ಬೆಳವಣಿಗೆ ಸಾಧ್ಯವಾಗುತ್ತದೆ
ಈ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಲು
ಯುವ ಸೌರಭ ,
ಬಾಲ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಚಿಗುರು
ಕಲಾ ಪ್ರತಿಭೋತ್ಸವ, ಕಲಾ ತರಬೇತಿ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಇಲಾಖೆ ಈ ನಾಡಿನ ಭಾಷೆ, ಕಲೆ ಸಂಸ್ಕೃತಿ ಮತ್ತು ಪರಂಪರೆಯನ್ನು ಜೀವಂತವಾಗಿಸಿದೆ. ಇಂದಿನ ದಿನಗಳಲ್ಲಿ ಪಾಶ್ಚಿಮತ್ಯ ಸಂಸ್ಕೃತಿಗೆ ತಲೆಬಾಗುತ್ತಿದ್ದೇವೆ
ಪಾಶ್ಚಿಮಾತ್ಯ ಸಂಸ್ಕೃತಿಗೆ ಯಾವುದೇ ಇತಿಹಾಸವಿಲ್ಲ
ಈ ನಾಡಿನ ಸಂಸ್ಕೃತಿಗೆ ಅಮೋಘವಾದ ಇತಿಹಾಸವಿದೆ
ನಾವೆಲ್ಲರೂ ದೇಶೀಯ ಗ್ರಾಮೀಣ ಜನಪದ ಸಾಹಿತ್ಯ ಪರಂಪರೆಯನ್ನು ಮೈಗೂಡಿಸಿಕೊಳ್ಳಬೇಕಾಗಿದೆ
ಎಂದರು . ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶರಣಪ್ಪ ಕೋಟ್ಯಾಳ ಮಾತನಾಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅನೇಕ ಕಾರ್ಯಕ್ರಮಗಳ ಮೂಲಕ ಈ ನಾಡಿನ ಭಾಷೆ, ಕಲೆ, ಸಂಸ್ಕೃತಿ ಯನ್ನು ಹಿರಿದಾಗಿಸಿದೆ ಎಂದರು
ತಾಲೂಕು ನೌಕರ ಸಂಘದ ಅಧ್ಯಕ್ಷ ಹನುಮಂತಪ್ಪ ನಾಯಕ್ ಮಾತನಾಡಿ
ಕನ್ನಡ ನಾಡು,ನುಡಿ, ನೆಲಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ ಮಕ್ಕಳಿಗೆ ಈ ಶ್ರೀಮಂತ ಪರಂಪರೆಯ ಅರಿವು ಮೂಡಿಸುವ ಕೆಲಸ ವಾಗಬೇಕು. ಈ ನಿಟ್ಟಿನಲ್ಲಿ ಈ ಚಿಗುರು ಕಾರ್ಯಕ್ರಮ ಬಾಲ ಪ್ರತಿಭೆಗಳಿಗೆ ಅತ್ಯುತ್ತಮ ವೇದಿಕೆಯಾಗಿದೆ. ಮಕ್ಕಳು ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ಸದುಪಯೋಗಪಡಿಸಿಕೊಳ್ಳಬೇಕು ಎಂದರು

ಬಾಲಪ್ರತಿಭೆ ವೈಷ್ಣವಿ ಕಮ್ಮಾರ್ ಮತ್ತು ತಂಡ ಪ್ರಸ್ತುತಪಡಿಸಿದ ಸುಗಮ ಸಂಗೀತ ಗಾಯನ ಪ್ರೇಕ್ಷಕರನ್ನು ರಂಜಿಸಿತು. ‘ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ’ ಹಾಡಿಗೆ ನೆರೆದಿದ್ದವರು ತಲೆದೂಗಿದರು.
ನಯನ ಮತ್ತು ತಂಡದವರು ಜಾನಪದ ನೃತ್ಯ ಮಲೆ ಮಾದೇಶ್ವರ ಕುರಿತು ಹೆಜ್ಜೆ ಹಾಕಿ ಸಂಭ್ರಮಿಸಿದರು. ಅಮಿತ್ ಮತ್ತು ತಂಡದವರು ಶಾಸ್ತ್ರೀಯ ಸಂಗೀತ , ಅಸರ ಜರಿನ್ ತಂಡದವರಿಂದ ಲವಕುಶರ ಕಾಳಗ ಬಯಲಾಟ ಪ್ರದರ್ಶಿಸಿದರು ಏಕಪಾತ್ರ ಅಭಿನಯ ಮತ್ತು ಸಮೂಹ ನೃತ್ಯ ರಂಗು ನೀಡಿತು

ಕಾರ್ಯಕ್ರಮದಲ್ಲಿ ಶ್ರೀ ಚಂದ್ರಶೇಖರ್ ಅವರಾದಿ, ಮಲ್ಲಿಕಾರ್ಜುನ್ ಕೊಟಗಿ, ಶಿವಕುಮಾರ್ ದಿವಟರ
ಹಾಗೂ ಅಂಬರೀಶ್ ಪಾಟೀಲ್
, ಕರ್ನಾಟಕ ಜನಪದ ಅಕಾಡೆಮಿ ಸದಸ್ಯ ಮೈಬೂಬ ಕಿಲ್ಲೆದಾರ ಇನ್ನಿತರರು ಉಪಸ್ಥಿತರಿದ್ದರು

Get real time updates directly on you device, subscribe now.

Comments are closed.

error: Content is protected !!