ಎ ಐ ಡಿ ವೈ ಓ ನೇತೃತ್ವದಲ್ಲಿ ಬಹದ್ದೂರ್ ಬಂಡಿ ಕೋಟೆ ಚಾರಣ

Get real time updates directly on you device, subscribe now.

Koppal :   ಎ ಐ ಡಿ ವೈ ಓ ಸಂಘಟನೆಯಿಂದ ಆಯೋಜನೆ ಮಾಡಿದ್ದ ಇಂದಿನ ಬಹದ್ದೂರ್ ಬಂಡಿ ಕೋಟೆ ಚಾರಣ ಅತ್ಯಂತ ಯಶಸ್ವಿಯಾಗಿ ನಡೆಯಿತು.
 ಇಂದಿನ ಯುವಜನರು ಸಾಮಾಜಿಕ ಜಾಲತಾಣ, ಜೂಜಾಟ, ಮಧ್ಯ-ಮಾಧಕ ವ್ಯಸನಗಳಿಗೆ ಪರ್ಯಾಯವಾಗಿ ಚಾರಣದಂತ ರಚನಾತ್ಮಕ ಕಾರ್ಯಕ್ರಮಗಳನ್ನ ಆಯೋಜನೆ ಮಾಡಿಕೊಳ್ಳಬೇಕು. ಮತ್ತು ಚಾರಣದಿಂದ ದೈಹಿಕ, ಮಾನಸಿಕ ಮತ್ತು ಬೌದ್ಧಿಕ ಸದೃಢತೆ ಬಳಸಿಕೊಳ್ಳಲು ಸಹಕಾರಿಯಾಗುತ್ತದೆ. ಎಂದು ಎ ಐ ಡಿ ವೈ ಓ ರಾಜ್ಯ ಕಾರ್ಯದರ್ಶಿಗಳಾದ ಸಿದ್ಲಿಂಗ ಬಾಗೇವಾಡಿ ಅಭಿಪ್ರಾಯಪಟ್ಟರು.
 ಚಾರಣದಲ್ಲಿ ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಆರ್ ವಿ ಕಾಮನೂರ್, ಕಾರ್ಯದರ್ಶಿ ಶರಣಬಸವ ಪಾಟೀಲ್, ಶರಣು ಗಡ್ಡಿ, ಮೌನೇಶ್, ಸುಭಾನ್, ಮಂಜುನಾಥ್, ಪ್ರವೀಣ್, ಸಿದ್ದು ಮುಂತಾದವರು ಭಾಗವಹಿಸಿ ಯಶಸ್ವಿಗೊಳಿಸಿದರು.

Get real time updates directly on you device, subscribe now.

Comments are closed.

error: Content is protected !!