ಕೊಪ್ಪಳ -೦೪ ರಾಜ್ಯದ ರೈತರಿಗೆ ಸಮರ್ಪಕ ವಿದ್ಯುತ್ ಪೂರೈಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಂಗ್ರೇಸ್ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದ್ದು. ಇಂಧನ ಸಚಿವ ಡಿ.ಕೆ. ಶಿವಕುಮಾರ ರೈತರಿಗೆ ೨೪ ಘಂಟೆ ನಿರಂತರವಾಗಿ ವಿದ್ಯುತ್ ನೀಡುತ್ತಿದ್ದೇವೆ ಎಂದು ಸುಳ್ಳು ಹೇಳಿಕೆಗಳನ್ನು ನೀಡಿ ರೈತರಿಗೆ ಮೋಸವೆಸಗುತ್ತಿದ್ದಾರೆ. ಒಟ್ಟಿನಲ್ಲಿ ರಾಜ್ಯದ ರೈತರ ಹಿತ ಕಾಪಾಡುವಲ್ಲಿ ಕಾಂಗ್ರೇಸ್ ಸರ್ಕಾರ ಬೇಜವಾಬ್ದಾರಿಯಾಗಿ ವರ್ತಿಸುತ್ತಿದೆ ಎಂದು ಬಿಜೆಪಿ ಮುಖಂಡ ಸಿದ್ಲಿಂಗಯ್ಯಸ್ವಾಮಿ ಹಿರೇಮಠರವರು ರಾಜ್ಯಸರ್ಕಾರ ವಿರುದ್ದ ಆಕ್ರೋಶ ವ್ಯೆಕ್ತಪಡಿಸಿ ಮಾತನಾಡಿದರು.


ಇಂದು ನಡೆದ ಪ್ರತಿಭಟನೆಯಲ್ಲಿ ಸಿದ್ಲಿಂಗಯ್ಯಸ್ವಾಮಿ ಹಿರೇಮಠ ಅಳವಂಡಿ, ತಾಲೂಕ ರೈತ ಮೋರ್ಚಾ ಅಧ್ಯಕ್ಷ ದೇವಪ್ಪ ವೆಂಕಟಾಪೂರ, ಗ್ರಾಮಾಂತರ ಅಧ್ಯಕ್ಷ ಡಾ|| ಕೊಟ್ರೇಶ ಶೇಡ್ಮಿ, ಡಿ. ಮಲ್ಲಣ್ಣ, ದೇವರಾಜ ಹಾಲಸಮುದ್ರ, ಮಲ್ಲಪ್ಪ ಬೇಲೇರಿ, ಹಾಲೇಶ ಕಂದಾರಿ, ಪರಮಾನಂದ ಯಾಳಗಿ, ನಾಮದೇವ ಜಕ್ಕಲಿ, ಮುದಿಯಪ್ಪ ತಿಗರಿ, ಎಚ್,ಎ ಕುಟಗನಹಳ್ಳಿ ವಕೀಲರು, ಸುರೇಶ ಮುದೋಳ, ರಾಮನಗೌಡ ,ದೊಡ್ಡನಿಂಗಪ್ಪ, ಮಲ್ಲಪ್ಪ ದದೆಗಲ್, ವಡಿಕೇರಿ ಯಮನಪ್ಪ, ಬಸವನಗೌಡ ಪೋಲಿಸ್ ಪಾಟೀಲ್, ರವಿ ಹಟ್ಟಿ, ನಿಂಗಪ್ಪ, ಕರಿಬಸಪ್ಪ ಮೇಟಿ, ಹನುಮಂತಪ್ಪ ನಯಕ್, ಈರಯ್ಯ ಮೆತಗಲ್, ಇನ್ನು ಮುಂತಾದವರು ಪಾಲ್ಗೊಮಡಿದ್ದರು.
Please follow and like us: