ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಾದಾಮಿ ಎಸ್.ಬಿ. ಮಮದಾಪುರ ಪದವಿ ಕಾಲೇಜಿನ ಪ್ರಾಚಾರ್ಯ ಪ್ರೊ. ಜೆ.ಬಿ. ಶೀಲವಂತರ್ ತಮ್ಮ ಭಾಷಣದಲ್ಲಿ ಸಮಾಜಕ್ಕೆ, ಸಾಹಿತ್ಯಕ್ಕೆ, ಸಾಂಸ್ಕೃತಿಕ ಲೋಕಕ್ಕೆ ಬಳ್ಳೊಳ್ಳಿ ಮನೆತನದ ಕೊಡುಗೆಗಳ ಬಗ್ಗೆ ಹೇಳುತ್ತ, ಶರಣರ ನಡೆ-ನುಡಿ, ಅವರ ಸಾಹಿತ್ಯ, ೧೨ ನೇ ಶತಮಾನದ ಅದ್ಭುತ ಕ್ರಾಂತಿ ಕುರಿತಾಗಿ ಮಾತನಾಡಿದರು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ಜಮುರಾ ಕಲಾಲೋಕ ತಂಡ ಚಿತ್ರದುರ್ಗದ ತೋಟಪ್ಪ ಉತ್ತಂಗಿ, ಶ್ರೀಮತಿ ಕೋಕಿಲಾ ರುದ್ರಮೂರ್ತಿ ಮತ್ತು ಸಂಗಡಿಗರ ವಚನ ಗಾಯನ ಎಲ್ಲರ ಗಮನ ಸೆಳೆಯಿತು.
ಇದೇ ಸಂದರ್ಭದಲ್ಲಿ ಬಳ್ಳೊಳ್ಳಿಯವರ ಮನೆಯಲ್ಲಿ, ಮಿಲ್ನಲ್ಲಿ ಸುಮಾರು ೪೦ ವರ್ಷಗಳಿಂದಲೂ ಸೇವೆ ಸಲ್ಲಿಸಿದ ಇಬ್ಬರು ಮಹನೀಯರನ್ನು ಮತ್ತು ಸಹಜ ಸಮೃದ್ಧಿ ಯೋಗದ ಶಿವಕುಮಾರ ಗುರೂಜಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪ್ರಾರಂಭದಲ್ಲಿ ಶ್ರೀಮತಿ ವಿಶಾಲಾಕ್ಷಿ ಹಿರೇಮಠ, ಕು. ಭೀಮಾಂಬಿಕಾ ಹಿರೇಮಠ ಮತ್ತು ಕು. ಅನ್ನಪೂರ್ಣ ಹಿರೇಮಠ ಪ್ರಾರ್ಥಿಸಿದರೆ, ಶಿವಯೋಗಿ ಬಳ್ಳೊಳ್ಳಿ ಸ್ವಾಗತಿಸಿದರು. ಬಸವರಾಜ್ ಮುದಗಲ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಹೇಶ ಬಳ್ಳಾರಿ, ವೀರೇಶ ಕೊಪ್ಪಳ ಕಾರ್ಯಕ್ರಮ ನಿರೂಪಿಸಿದರೆ, ಕೊನೆಯಲ್ಲಿ ಬಸವರಾಜ್ ಬಳ್ಳೊಳ್ಳಿ ವಂದಿಸಿದರು.