ಕೊಪ್ಪಳ : ಗವಿಮಠದ ಕೆರೆಯ ದಂಡೆಯ ಮೇಲೆ ಬೆಳಕಿನೆಡೆಗೆ ಕಾರ್ಯಕ್ರಮದ ನಂತರ ನಡೆದ ಸರಳ ಸಮಾರಂಭದಲ್ಲಿ ಗವಿಸಿದ್ದೇಶ್ವರ ಜಾತ್ರಾ ನಿಮಿತ್ಯ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ವಿಜೇತರಾದ ಪ್ರಥಮ ಬಹುಮಾನ -ಶ್ರೀನಿವಾಸ ದಲಬಂಜನ ,ದ್ವಿತೀಯ – ಬಸವರಾಜ ಕುಂಬಾರ,ತೃತೀಯ : ರುದ್ರೇಶ ವಕ್ರಾಣಿ,ಸಮಾಧಾನಕರ ಬಹುಮಾನಗಳು-ಗಣೇಶ ವಿಶ್ವಕರ್ಮ,ಕೃಷ್ಣ ಸೊರಟೂರ,ರಾಮಪ್ಪ ನೆರೆಬೆಂಚಿ ಇವರಿಗೆ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಬಹುಮಾನ ವಿತರಿಸಿದರು.
ಈ ಸಂದರ್ಭದಲ್ಲಿ ಕೊಪ್ಪಳ ತಾಲೂಕಾ ಛಾಯಾಗ್ರಾಯಕರ ಸಂಘದ ಅಧ್ಯಕ್ಷರಾದ ಗೋವಿಂದರಾವ್ ಪದಕಿ, ಉಪಾಧ್ಯಕ್ಷ- ಕನಕೂಸಾ ದಲಬಂಜನ, ಕಾರ್ಯದರ್ಶಿ ವಿಜಯ ವಸ್ತ್ರದ, ಇಮಾಮಸಾಬ ಬಿಜಾಪೂರ,ಅಜಂತಾ ಗೌಡ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಫೋಟೋಗ್ರಾಫಿಯ ಸ್ಪರ್ಧೆಯ ವಿಜೇತರಿಗೆ ಗವಿಶ್ರೀಗಳಿಂದ ಬಹುಮಾನ ವಿತರಣೆ
Leave a Reply
You must be logged in to post a comment.