ಕೊಪ್ಪಳ ಬಿಜೆಪಿ ಅಭ್ಯರ್ಥಿ ಸಿ.ವಿ.ಚಂದ್ರಶೇಖರಗೆ ಬಿ.ಪಾರಂ ಕೈತಪ್ಪಿದ್ದರಲ್ಲಿ ನನ್ನ ಕೈವಾಡವಿಲ್ಲ. ಕೊಪ್ಪಳ ಕ್ಷೇತ್ರದ ಬಿ.ಪಾರಂ ನನ್ನ ಕೈಗೆ ಕೊಟ್ಟಿರಲಿಲ್ಲ.ಕುಟುಂಬ ರಾಜಕಾರಣ ಯಾವ ಪಕ್ಷದಲ್ಲಿಲ್ಲಾ ? ಎಲ್ಲ ಕಡೆಯೂ ಇದೆ ಎಂದು ಕೊಪ್ಪಳ ಸಂಸದ ಕರಡಿ ಸಂಗಣ್ಣ ಹೇಳಿದರು. ಂದು ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು
ಮಾಜಿ ಸಂಸದರಾದ ಶಿವರಾಮಗೌಡ, ಕೆ.ವಿರುಪಾಕ್ಷಪ್ಪ ಪಕ್ಷ ಬಿಟ್ಟಿರುವುದು ಯಾವುದೇ ಪರಿಣಾಮ ಬೀರುವುದಿಲ್ಲ.ಕಾರ್ಯಕರ್ತರ ಮತ್ತು ಜನಸಾಮಾನ್ಯರ ಟ್ರೆಂಡ್ ತಿಳಿದುಕೊಳ್ಳಬೇಕಿತ್ತು. ಅವರ ಮನವೊಲಿಸುವ ಕೆಲಸ ಮಾಡಲಾಗಿತ್ತು…
ನಾಳೆ ಅಮಿತ್ ಶಾ ಕೊಪ್ಪಳ ಜಿಲ್ಲೆಗೆ ಆಗಮಿಸಲಿದ್ದಾರೆ ವಿವಿದೆಡೆ ಕಾರ್ಯಕ್ರಮಗಳು ಇವೆ.. ಇವತ್ತು ನರೇಂದ್ರ ಮೋದಿ ಯವರ ಸಂವಾದ ಮಾರ್ಗದರ್ಶಿ ಯಾಗಿತ್ತು.. ಕಾರ್ಯಕರ್ತರಿಗೆ ಸ್ಪೂರ್ತಿ ತುಂಬಿದೆ ಎಂದು ಪತ್ರಿಕಾಗೋಷ್ಠಿ ಯಲ್ಲಿ ಸಂಸದ ಕರಡಿ ಸಂಗಣ್ಣ ಹೇಳಿದರು.