ಗೋಕಾಕ್ : ಮುಂದಿನ ಶಾಸಕ, ಭಾವಿ ಸಚಿವ ರಮೇಶ ಜಾರಕಿಹೊಳಿ ನಾನೇನು ವಿಜಯೋತ್ಸವಕ್ಕೆ ಬಂದಿದ್ದೀನಾ, ಪ್ರಚಾರಕ್ಕೆ ಬಂದಿದ್ದಿನಾ ಎಂಬ ಅನುಮಾನವಿದೆ. ರಮೇಶ ಜಾರಕಿಹೊಳಿ ವಿಶೇಷ ಪ್ರಯತ್ನದಿಂದ ನಾನು ಸಿಎಂ ಆಗಿದ್ದೇನೆ.ಅವರು ಸಿಎಂ ಆಗಲು ಬಯಸಲಿಲ್ಲ.ನಾನು ನಮ್ಮ ಸಮಸ್ತ ವೀರಶೈವ ಬಂದು ಕೇಳಲು ಬಯಸುತ್ತೇನೆ. ಸಮಾಜದ ಬಂಧುಗಳು ಬಿಜೆಪಿ ಬೆಂಬಲಿಸಬೇಕು.15 ಕ್ಷೇತ್ರಗಳನ್ನು ಮಾದರಿ ಕ್ಷೇತ್ರಗಳಾಗಿ ಅಭಿವೃದ್ಧಿ ಕೆಲಸ. ಅತಿವೃಷ್ಠಿ ಸಂದರ್ಭದಲ್ಲಿ ಕೆಲಸ ಮಾಡಿದ್ದೇವೆ. ದೇಶದಲ್ಲಿ ಇತಿಹಾಸದಲ್ಲಿ ಯಾರು ಮಾಡದ ಕೆಲಸ ಮಾಡಿದ್ದೇವೆ.ವಾಲ್ಮೀಕಿ, ಕನಕ ಜಯಂತಿ, ಹಜ್ ಭವನ ನಿರ್ಮಾಣಕ್ಕೆ ಹಣ ಕೊಟ್ಟೆ. ನಾನು ಹಿಂದು, ಮುಸ್ಲಿಂ ಎಂದು ಭೇದಭಾವ ಮಾಡಿಲ್ಲ.ನಾನು ನೀರಾವರಿಗೆ ಹೆಚ್ಚಿನ ಆದ್ಯತೆ ಕೊಟ್ಟಿದ್ದೇನೆ.ರಮೇಶ ಜಾರಕಿಹೊಳಿ ಸಹಾಯ ನಮ್ಮ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ. ಲಿಂಗಾಯತ ಸಮಾಜದ ಒಂದೊಂದು ಮತವೂ ರಮೇಶ ಜಾರಕಿಹೊಳಿಗೆ ಕೊಡಬೇಕು. ಬಾಲಚಂದ್ರ ಜಾರಕಿಹೊಳಿ ರಾತ್ರಿ ಬಂದು ಕೆಎಂಎಫ್ ಅಧ್ಯಕ್ಷನಾಗೋಕೆ ಸಹಿ ಮಾಡಿ ಅಂದ್ರು.ಕಣ್ಣು ಮುಚ್ಚಿ ಸಹಿ ಮಾಡಿದ್ದೇನೆ.ಗೋಕಾಕ್ ಎಲ್ಲಾ ಅಭಿವೃದ್ಧಿ ಕೆಲಸ ಮಾಡೋಕೆ ಸಿದ್ದ
ರಾಜ್ಯ ಸರ್ಕಾರದಲ್ಲಿ ಹಣದ ಕೊರತೆ ಇಲ್ಲ. ಫೈವ್ ಸ್ಟಾರ್ ಹೋಟೆಲ್ ಇದ್ದು ಐಷಾರಾಮಿ ಜೀವನ ನನಗೆ ಗೊತ್ತಿಲ್ಲ. ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿಗೆ ಟಾಂಗ್. ದೇಶದಲ್ಲಿ ಎಲ್ಲಿದೆ ಕಾಂಗ್ರೆಸ್ ಪಕ್ಷ.ಇವತ್ತು ಒಂದು ಶುಭದಿವಸ.ಮಹಾರಾಷ್ಟ್ರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಒಂದು ಲಕ್ಷ ಮತದಿಂದ ರಮೇಶ ಜಾರಕಿಹೊಳಿ ಗೆದ್ರೆ ನನಗೆ ಸಮಾಧಾನ. ಚುನಾವಣೆ ಗೆದ್ದಾಗಿದೆ ಲಿಡ್ ಎಷ್ಟು ಎಂಬುದು ನಿರ್ಧಾರವಾಗಬೇಕು. ರಮೇಶ ಜಾರಕಿಹೊಳಿ ಋಣ ತೀರಿಸಬೇಕಿದೆ. ಮುಂಬೈನಲ್ಲಿ ಇದ್ದು ನಮಗಾಗಿ ಹೋರಾಟ ಮಾಡಿದ್ದಾರೆ. ರಮೇಶ ಜಾರಕಿಹೊಳಿಗೆ ಹೇಗೆ ಅಭಿನಂದನೆ ಸಲ್ಲಿಸಬೇಕು ಗೊತ್ತಿಲ್ಲ. ಸ್ವಾಭಿಮಾನಕ್ಕೆ ದಕ್ಕೆಯಾದಾಗ ಹೊರ ಬಂದು ನನಗೆ ಬೆಂಲಿಸಿದ್ದಾರೆ.ಗೋಕಾಕ್, ಅಥಣಿ ಹಾಗೂ ಕಾಗವಾಡ ಮೂರು ಕ್ಷೇತ್ರ ಮುಖ್ಯ. ನಾನು ಯಾವುದೇ ಸಮಾಜದ ವಿರೋಧಿಯಲ್ಲ. ಗೋಕಾಕ್ ನಲ್ಲಿ ಸಿಎಂ ಬಿ ಎಸ್ ಯಡಿಯೂರಪ್ಪ .