ಕೈಗಾರಿಕಾ ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ಕೊಪ್ಪಳ, ವಿಜಯನಗರ, ಗದಗ ಹಾಗೂ ಕರ್ನಾಟಕ ತಾಂತ್ರಿಕ ಸಂಸ್ತೆ ಮತ್ತು ಕೈಗಾರಿಕಾ ವಾಣಿಜ್ಯ ಇಲಾಖೆ ಕೊಪ್ಪಳ ವಿಜಯನಗರ ಮತ್ತು ಗದಗ ಸಂಯುಕ್ತಾಶ್ರಯದಲ್ಲಿ ಡಿಸೆಂಬರ್ 3ರಂದು ಜಿಲ್ಲಾಡಳಿತ ಭವನದಲ್ಲಿನ ಆಡಿಟೋರಿಯಂ ಹಾಲನಲ್ಲಿ ನಡೆದ ಕೈಗಾರಿಕಾ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಉದ್ಯಮಿಯಾಗು-ಉದ್ಯೋಗ ನೀಡು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೈಗಾರಿಕಾ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿವೆ. ಅದನ್ನು ಬಳಸಿಕೊಂಡು ತಾವುಗಳು ಕೈಗಾರಿಕೆಗಳನ್ನು ಸ್ಥಾಪಿಸಿ ಇತರರಿಗೆ ಉದ್ಯೋಗ ಕೊಡುವ ಮಟ್ಟಕ್ಕೆ ಬೆಳೆಯಬೇಕು ಎಂದು ಮನವಿ ಮಾಡಿದ ಸಚಿವರು, ಇದಕ್ಕಾಗಿ ಸರಕಾರವು ಸಾವಿರಾರು ಕೋಟಿ ರೂ ವ್ಯಯಿಸುತ್ತಿದ್ದು ಇದರ ಸದುಪಯೋಗವಾಗಬೇಕು ಎಂದು ಹೇಳಿದರು.
ಕೈಗಾರಿಕೆಯು ಶಿಕ್ಷಣದಷ್ಡೇ ಮಹತ್ವದ ಕ್ಷೇತ್ರವಾಗಿದೆ. ಶಿಕ್ಷಣ ಮತ್ತು ಕೈಗಾರಿಕೆಗಳು ಸರಿಯಾಗಿರುವ ದೇಶಗಳು ಸಾಕಷ್ಟು ಮುಂದುವರೆದಿವೆ ಎಂದರು.
ಮಾನ್ಯ ಪ್ರಧಾನಿ ಮಂತ್ರಿಗಳ ಆತ್ಮನಿರ್ಬರ್ ಭಾರತ ಕನಸನ್ನು 100 ವರ್ಷಗಳ ಹಿಂದೆಯೇ ಕರ್ನಾಟಕದಲ್ಲಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನನಸು ಮಾಡಿದ್ದರು ಎಂಬುದು ನಮಗೆ ಹೆಮ್ಮೆಯ ವಿಷಯ. ಬೆಳಗ್ಗೆಯಿಂದ ಸಂಜೆವರೆಗೆ ನಾವು ಬಳಸುವ ಎಲ್ಲ ವಸ್ತುಗಳ ತಯಾರಿಕೆಯನ್ನು ಒಡೆಯರ್ ಅವರು ಶತಮಾನದ ಹಿಂದೆಯೇ ನಡಿಸಿದ್ದರು. ಈ ಕಾರಣದಿಂದಲೇ ಜಗತ್ತಿನ ನಕ್ಷೆಯಲ್ಲಿ ಮೈಸೂರ ವಿಶೇಷ ಸ್ಥಾನ ಪಡೆದಿದೆ. ಕಲ್ಯಾಣ ಕರ್ನಾಟಕ ಪ್ರದೇಶದ ಜಿಲ್ಲೆಗಳು ಹಿಂದುಳಿಯಲು ಕಾರಣ ನೀರಾವರಿ ಮತ್ತು ಕೈಗಾರಿಕೆಗಳು ಕಡಿಮೆ ಇರುವುದಕ್ಕೆ. ಹೀಗಾಗಿ ಕೊಪ್ಪಳ, ವಿಜಯನಗರ ಮತ್ತು ಗದಗ ಜಿಲ್ಲೆಯ ಸಾರ್ವಜನಿಕರು ಕೈಗಾರಿಕಾ ಕ್ಷೇತ್ರದತ್ತ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು. ಕೈಗಾರಿಕಾ ಪ್ರಗತಿಯಲ್ಲಿ ಕೊಪ್ಪಳ, ವಿಜಯನಗರ ಮತ್ತು ಗದಗ ಜಿಲ್ಲೆಗಳು ಕೂಡ ಉತ್ತಮ ಸ್ಥಾನ ಪಡೆಯಬೇಕು ಎಂದರು.
ಉದ್ಯಮಿಯಾಗುವ ಆಸೆ ಹೊಂದಿದ ಯಾರೇ ಇರಲಿ ನೀವು ಕೈಗಾರಿಕಾ ಇಲಾಖೆಯಲ್ಲಿ ನೋಂದಣಿ ಮಾಡಿಸಿರಿ. ನಿಮ್ಮನ್ನು ತಂಡಗಳನ್ನಾಗಿಸಿ ತರಬೇತಿಗೊಳಿಸಿ ನಿಮ್ಮನ್ನು ಉದ್ಯಮಿಯಾಗಿಸುವುದು ನಮ್ಮ ಕೈಗಾರಿಕಾ ಇಲಾಖೆಯ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಸರ್ ಎಂ ವಿಶ್ವೇಶ್ವರಯ್ಯ ಅವರು ಕಂಡAತಹ ಕನಸುಗಳು ನಿಮ್ಮದಾಗಬೇಕು. ನಾನು ಕೈಗಾರಿಕೋದ್ಯಮಿ ಆಗಲೇಬೇಕು ಎನ್ನುವ ಹಠ ನಿಮ್ಮದಾಗಬೇಕು. ಬ್ಯಾಂಕಿನವರೊAದಿಗೆ ವಿಶ್ವಾಸಗಳಿಸಿಕೊಳ್ಳಬೇಕು. ಅಂದಾಗ ಉದ್ಯಮಿಯಾಗಲು ಸಾಧ್ಯ ಎಂದು ಸಲಹೆ ಮಾಡಿದರು.
ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 100 ಕೋಟಿ ರೂ. ಬಂಡವಾಳ ಹೂಡಿಕೆಗೆ ಅವಕಾಶ ಸಿಕ್ಕಿದೆ. ಗದಗ ಜಿಲ್ಲೆಯಲ್ಲಿ ಶೆ.38ರಷ್ಟು, ಕೊಪ್ಪಳ ಜಿಲ್ಲೆಯಲ್ಲಿ ಶೇ.65ರಷ್ಟು ಮತ್ತು ವಿಜಯನಗರ ಜಿಲ್ಲೆಯಲ್ಲಿ ಶೇ.5ರಷ್ಟು ಬಂಡವಾಳ ಹೂಡಿಕೆಗೆ ಅವಕಾಶ ಸಿಕ್ಕಿದೆ ಎಂದು ತಿಳಿಸಿದರು.
ಬೆಂಗಳೂರಿನ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ನಿರ್ದೇಶಕರಾದ ಸತ್ಯಭಾಮಾ ಸಿ. ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಂಸದರಾದ ಕರಡಿ ಸಂಗಣ್ಣ, ಶಾಸಕರಾದ ಅಮರೇಗೌಡ ಪಾಟೀಲ ಬಯ್ಯಾಪೂರ, ಕೊಪ್ಪಳ ಕೆ.ಎಫ್.ಐ.ಎಲ್ ಮ್ಯಾನೇಜಿಂಗ್ ಡೈರೆಕ್ಟರ್ ಆರ್.ವಿ ಗುಮಾಸ್ತೆ, ಜಿಲ್ಲಾಧಿಕಾರಿಗಳಾದ ಎಂ.ಸುAದರೇಶ್ ಬಾಬು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಿ.ಫೌಜಿಯಾ ತರನ್ನುಮ್, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಅಪರ ನಿರ್ದೇಶಕರಾದ (ಎಂ.ಎಸ್.ಎA.ಇ) ಹೆಚ್.ಎಂ ಶ್ರೀನಿವಾಸ್, ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷರಾದ ಅಶ್ವಿನ್ ಕೋತಂಬರಿ, ಗದಗ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷರಾದ ಮಧುಸೂದನ್ ಪುಣೇಕರ್ ಸೇರಿದಂತೆ ಕೊಪ್ಪಳ, ಗದಗ ಹಾಗೂ ವಿಜಯನಗರ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಸೇರಿದಂತೆ ಇನ್ನೀತರರು ಇದ್ದರು.
ಕೊಪ್ಪಳ, ವಿಜಯನಗರ, ಗದಗ ಜಿಲ್ಲೆಗಳಲ್ಲಿ ಉದ್ಯಮಿಯಾಗಲು ಸಾಕಷ್ಟು ಅವಕಾಶ
Please follow and like us: