ಅಮೃತ ಸರೋವರ ಕಾಮಗಾರಿಗಳನ್ನು ವೀಕ್ಷಿಸಿದ ಜಿ.ಪಂ ಯೋಜನಾ ನಿರ್ದೇಶಕ
ಕೊಪ್ಪಳ: ಅ
ಕಲ್ ತಾವರಗೇರಾ ಗ್ರಾ.ಪಂ ವ್ಯಾಪ್ತಿಯ ಹಾಲಹಳ್ಳಿ, ದನಕನದೊಡ್ಡಿ, ಕೆಂಚನದೋಣಿ, ಕೂಕನಪಳ್ಳಿ ಗ್ರಾಮದ ಕೆರೆ, ವಣಬಳ್ಳಾರಿ ಗ್ರಾ.ಪಂ.ಯ ದಿಡುಗು ಕೆರೆ ಮತ್ತು ಮೆತಗಲ್ ಕೆರೆ ಸೇರಿದಂತೆ ಇಂದರಗಿ ಗ್ರಾಮದ ಹೊಸ ಕೆರೆಗಳನ್ನು ವೀಕ್ಷಿಸಲಾಯಿತು. ಇದಕ್ಕೂ ಮುನ್ನ ಕಲ್ ತಾವರಗೇರಾ ಹಾಗೂ ಜಿನ್ನಾಪುರ ತಾಂಡಾದಲ್ಲಿ ಜೆಜೆಎಂ ಕಾಮಗಾರಿಗಳನ್ನು ಪರಿಶೀಲಿಸಿದರು.
ನಂತರ ಗುಳದಳ್ಳಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಅನುಷ್ಠಾನಗೊಳ್ಳುತ್ತಿರುವ ಎಲ್.ಡಬ್ಲ್ಯೂಎಂ ಕಾಮಗಾರಿ ಸೇರಿದಂತೆ ಶಾಲಾ ಕಾಮಗಾರಿಗಳನ್ನು ಯೋಜನಾ ನಿರ್ದೇಶಕರು ವೀಕ್ಷಿಸಿ, ಕಾಮಗಾರಿಯನ್ನು ಆದಷ್ಟು ಬೇಗಾ ಮುಗಿಸುವಂತೆ ತಿಳಿಸಿದರು.ಈ ವೇಳೆ ಆರ್.ಡಬ್ಲ್ಯೂಎಸ್ ಇಲಾಖೆಯ ಎಇಇ ವಿಲಾಸ್ ಬೋಸ್ಲೆ, ಸಹಾಯಕ ನಿರ್ದೇಶಕರಾದ ಸೌಮ್ಯ ಕೆ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳಾದ ಬೆಟದಪ್ಪ, ನಾಗರಾಜ್, ಶಿವಬಸಪ್ಪ ಹಾಗೂ ತಾಂತ್ರಿಕ ಸಂಯೋಜಕರಾದ ವಿಶ್ವನಾಥ ಜಿ, ಐಇಸಿ ಸಂಯೋಜಕ ಶಿವಕುಮಾರ್ ಕೆ, ತಾಂತ್ರಿಕ ಸಹಾಯಕರಾದ ಸಯ್ಯದ್ ಪಾಶಾ, ಕೊಟ್ರೇಶ್ ಜವಳಿ, ಲಕ್ಷ್ಮೀ ಸೇರಿದಂತೆ ಗ್ರಾ.ಪಂ ಅಧ್ಯಕ್ಷರು, ಸದಸ್ಯರು, ಸಿಬ್ಬಂದಿಯವರು ಇದ್ದರು.