ಸ್ವ-ಸಹಾಯ ಸಂಘದ ಮಹಿಳೆಯರಿಂದ ಸಂಜೀವಿನಿ ಅಗರಬತ್ತಿ ಘಟಕ” ಉದ್ಘಾಟನೆ


ಕನ್ನಡನೆಟ್ ಸುದ್ದಿ : ಸಂಜೀವಿನಿ-ಎನ್.ಆರ್‌ಎಲ್‌ಎA ಯೋಜನೆಯಡಿ “ಸ್ವ-ಸಹಾಯ ಸಂಘದ ಮಹಿಳೆಯರಿಂದ ಸಂಜೀವಿನಿ ಅಗರಬತ್ತಿ ಘಟಕ”ವನ್ನು ಶಿವಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಉದ್ಘಾಟನೆ ಮಾಡಲಾಯಿತು.
ಕೇಂದ್ರ ಪುರಸ್ಕೃತ ಸಂಜೀವಿನಿ-ಎನ್.ಆರ್.ಎಲ್.ಎA ಯೋಜನೆಯಡಿ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮಾರ್ಗದರ್ಶನದಲ್ಲಿ “ಮಿಷನ್@35” ಅಡಿಯಲ್ಲಿ ಸಂಜೀವಿನಿ-ಎನ್.ಆರ್.ಎಲ್.ಎA ಯೋಜನೆಯ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟಗಳಿಂದ ಜಿಲ್ಲೆಯ ಪ್ರತೀ ತಾಲೂಕಿನಿಂದ 5 ವಿಭಿನ್ನ ಚಟುವಟಿಕೆಗಳನ್ನು ಅನುಷ್ಟಾನ ಮಾಡಲು ಯೋಜನೆ ರೂಪಿಸಲಾಗಿತ್ತು. ಅದರಂತೆ ಕೊಪ್ಪಳ ತಾಲೂಕಿನ 5 ವಿಭಿನ್ನ ಚಟುವಟಿಕೆಗಳಲ್ಲಿ ಶಿವಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ “ಶ್ರೀಜನನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟ (ರಿ)”ದ ವತಿಯಿಂದ 6 ಜನ ಸ್ವ-ಸಹಾಯ ಸಂಘದ ಮಹಿಳೆಯರಿಂದ “ಸಂಜೀವಿನಿ ಅಗರಬತ್ತಿ ಘಟಕ” ಪ್ರಾರಂಭಿಸಲಾಗಿದ್ದು, ಇಂದು ಒಕ್ಕೂಟದ ಅದ್ಯಕ್ಷರಾದ ದುರ್ಗಾ ಸುಧಾಕರ ರವರು ರಿಬ್ಬನ್ ಕಟ್ ಮಾಡುವುದರ ಮೂಲಕ “ಸಂಜೀವಿನಿ ಅಗರಬತ್ತಿ ಘಟಕ” ವನ್ನು ಉದ್ಘಾಟಿಸಿದರು.

ಗ್ರಾಮ ಪಂಚಾಯತಿಯ ಅಧ್ಯಕ್ಷೆ ರೇಖಾ ಬಸವರಾಜ ಮತ್ತು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ ಸಜ್ಜನ ರವರು “ಅಗರಬತ್ತಿ ಘಟಕದ” ಮಷಿನ್ ಆಪರೇಟಿಂಗ್ ಮಾಡುವುದರ ಮೂಲಕ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ತಾಲೂಕು ಅಭಿಯಾನ ನಿರ್ವಹಣಾ ಘಟಕದ ತಾಲೂಕ ಕಾರ್ಯಕ್ರಮ ವ್ಯವಸ್ಥಾಪಕರು ಹಾಗೂ ವಲಯ ಮೇಲ್ವಿಚಾರಕರು ಒಕ್ಕೂಟದ ಪದಾಧಿಕಾರಿಗಳು, ಒಕ್ಕೂಟದ ಎಮ್.ಬಿ.ಕೆ & ಎಲ್.ಸಿ.ಆರ್.ಪಿ ರವರು ಹಾಗೂ ಸ್ವ-ಸಹಾಯ ಗುಂಪಿನ ಮಹಿಳೆಯರು ಉಪಸ್ಥಿತರಿದ್ದರು.

Please follow and like us: