ಬೆಂಗಳೂರು , ನ . 15 : ರಾಣೆಬೆನ್ನೂರು ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಮುಖಂಡ ಅರುಣ್ ಕುಮಾರ್ ಪೂಜಾರರನ್ನು ಕಣಕ್ಕಿಳಿಸಲಾಗುವುದು ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇಂದು ಘೋಷಣೆ ಮಾಡಿದರು . ಟಿಕೆಟ್ ಆಕಾಂಕ್ಷಿಯಾಗಿದ್ದ ಆರ್ . ಶಂಕರ್ಗೆ ಎಂಎಲ್ಸಿ ಮಾಡಿ ಮಂತ್ರಿಗಿರಿ ಭರವಸೆ ನೀಡಿರುವ ಯಡಿಯೂರಪ್ಪ
ರಾಣೆಬೆನ್ನೂರಿಗೆ ಬಿಜೆಪಿ ಅಭ್ಯರ್ಥಿಯನ್ನು ಘೋಷಿಸಿದರು . ಅನರ್ಹ ಶಾಸಕ ಶಂಕರ್ ತನಗೆ ರಾಣೆಬೆನ್ನೂರಿನ ಟಿಕೆಟ್ ನೀಡಬೇಕೆಂದು ಹಠ ಹಿಡಿದಿದ್ದರು . ಆದರೆ , ಸ್ಥಳೀಯ ಬಿಜೆಪಿ ನಾಯಕರು ಶಂಕರ್ಗೆ ಟಿಕೆಟ್ ನೀಡಿದರೆ ಅವರು ಸೋಲುವುದು | ನಿಶ್ಚಿತ ಎಂದು ಹೇಳಿದ ಕಾರಣ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ . ಗುರುವಾರ ಬಿಜೆಪಿಗೆ ಸೇರ್ಪಡೆಯಾಗಿದ್ದ ಆರ್ . ಶಂಕರ್ ಇಂದು ತನ್ನ ಬೆಂಬಲಿಗರ ಜೊತೆಗೆ ಸಿಎಂ ಭೇಟಿಯಾಗಲು ಬಂದಿದ್ದರು . ಸಿಎಂ ಭರವಸೆಯ ಬಳಿಕ ರಾಣೆಬೆನ್ನೂರು ಚುನಾವಣೆಯ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ . ಆದರೆ , ಶಂಕರ್ ನಿರ್ಧಾರಕ್ಕೆ ಅವರ ಜೊತೆಗೆ ಬಂದಿದ್ದ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ . ರಾಣೆಬೆನ್ನೂರು ಕ್ಷೇತ್ರದಲ್ಲಿ ತನ್ನ ಮಗ ಕಾಂತೇಶ್ಗೆ ಟಿಕೆಟ್ ನೀಡಲು ಸಚಿವ ಕೆಎಸ್ ಈಶ್ವರಪ್ಪ ಪ್ರಯತ್ನ ನಡೆಸಿದ್ದರು . ಇದೀಗ ಅರುಣ್ ಕುಮಾರ್ಗೆ ಸಿಎಂ ಟಿಕೆಟ್ ಘೋಷಣೆ ಮಾಡಿದ್ದಾರೆ . “
ರಾಣೆಬೆನ್ನೂರು ಕ್ಷೇತ್ರಕ್ಕೆ ಅರುಣಕುಮಾರ್ ಪೂಜಾರ್ ಬಿಜೆಪಿ ಅಭ್ಯರ್ಥಿ
Please follow and like us: